ನ್ಯೂ ಇಯರ್ ನೈಟ್ ಶಾಕ್: “ದಕ್ಷ” IPS ಲಾಬುರಾಮ್ ಕಂಟಿನ್ಯೂ…!

ಬೆಂಗಳೂರು: ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಲಾಬುರಾಮ್ ಅವರು, ಇವತ್ತು ಟ್ರಾನ್ಸಫರ್ ಆಗ್ತಾರೆ ಎಂದು ಬಕಪಕ್ಷಿಗಳಂತೆ ಕಾದು ಕುಳಿತಿದ್ದ ಹಲವರಿಗೆ 2021ರ ರಾತ್ರಿ ಸರಕಾರ ಶಾಕ್ ನೀಡಿದೆ.

ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಆಗಿ ಅಧಿಕಾರ ವಹಿಸಿಕೊಂಡಾಗಿನಿಂದ ಲಾಬುರಾಮ್ ಅವರು, ಈಗ ಹೋಗ್ತಾರೆ, ಆಗ ಹೊಗ್ತಾರೆ ಎಂದು ಪದೇ ಪದೇ ವದಂತಿಗಳನ್ನ ಇಲಾಖೆಯ ಕೆಲವರು ಹಬ್ಬಿಸುತ್ತಿದ್ದರು.
ಮೊನ್ನೆ ಮೊನ್ನೆಯಂತೂ ಲಾಬುರಾಮ್ ಅವರಿಗೆ ಪ್ರಮೋಷನ್ ಇದೆ. ಬೇರೆ ಕಡೆ ಹೋಗ್ತಾರೆ, ಲೋಕೇಶಕುಮಾರ ಬರ್ತಾರೆ… ತ್ಯಾಗರಾಜನ್ ಬರ್ತಾರೆ ಎಂದು ಊಹಾಪೋಹಗಳನ್ನ ಎಬ್ಬಿಸಲಾಗುತ್ತಿತ್ತು.
ಈ ಎಲ್ಲ ವದಂತಿಗಳಿಗೂ ಸರಕಾರದ ಆದೇಶ ತೆರೆ ಎಳೆದಿದೆ. ದಕ್ಷ ಐಪಿಎಸ್ ಅಧಿಕಾರಿ ಲಾಬುರಾಮ್ ಅವರಿಗೆ ಪ್ರಮೋಷನ್ ನೀಡಿ, ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರನ್ನಾಗಿ ಮುಂದುವರೆಸಲಾಗಿದೆ.