Posts Slider

Karnataka Voice

Latest Kannada News

ಪೊಲೀಸ್ ಕಮೀಷನರ್ ಲಾಬುರಾಮ್ ರಿಂದ ಧಾರವಾಡದಲ್ಲಿ ಗಾಂಧಿಗಿರಿ…!

1 min read
Spread the love

ಧಾರವಾಡ: ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯೋರ್ವರು ಮಾಸ್ಕ್ ಹಾಕಿಕೊಂಡಿಲ್ಲವೆಂಬ ಕಾರಣಕ್ಕೆ ವೃದ್ಧನೋರ್ವನನ್ನ ಮನಬಂದಂತೆ ಥಳಿಸಿದ ಘಟನೆ ನಡೆದ ಕೆಲವೇ ಗಂಟೆಗಳ ಅಂತರದಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಲಾಬುರಾಮ್ ಅವರು ಧಾರವಾಡದಲ್ಲಿ ಗಾಂಧಿಗಿರಿ ತೋರಿಸಿದ್ದಾರೆ.

ಧಾರವಾಡ ಜಿಲ್ಲಾಡಳಿತದಿಂದ ಜನರಲ್ಲಿ ಜಾಗೃತೆ ಮೂಡಿಸುವ ಉದ್ದೇಶದಿಂದ ಬೆಳ್ಳಂಬೆಳಿಗ್ಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಜೊತೆಗೂಡಿ ಬಂದ ಪೊಲೀಸ್ ಕಮೀಷನರ್ ಲಾಬುರಾಮ್ ಅವರು ಸಾರ್ವಜನಿಕರಿಗೆ ಮಾಸ್ಕಗಳನ್ನ ಕೊಟ್ಟು, ತಮ್ಮತನವನ್ನ ತೋರಿಸಿದರು.

ಜನರಲ್ಲಿ ಸಮಾಧಾನದಿಂದ ಎಚ್ಚರಿಕೆ ನೀಡುವ ಜೊತೆಗೆ, ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕೆಂದು ಮನವಿ ಮಾಡಿಕೊಂಡ ಪೊಲೀಸ್ ಕಮೀಷನರ್ ಲಾಬುರಾಮ್ ಅವರು, ಸಾರ್ವಜನಿಕರ ಪ್ರೀತಿಗೆ ಪಾತ್ರರಾದರು.

ಧಾರವಾಡ ನಗರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಜನಜಾಗೃತೆ ಮಾಡಲು ಮುಂದಾಗಿದೆ. ಮಾರುಕಟ್ಟೆ ಪ್ರದೇಶದಲ್ಲಿ ಬರುವ ಗ್ರಾಮೀಣ ಪ್ರದೇಶದ ಜನರಿಗೆ ತಿಳುವಳಿಕೆ ನೀಡುವುದಕ್ಕೂ ಜಿಲ್ಲಾಡಳಿತ ಮುಂದಾಗಿರುವುದು ವಿಶೇಷವಾಗಿದೆ.


Spread the love

Leave a Reply

Your email address will not be published. Required fields are marked *