“ಮೋಸದ ಆಟದಲ್ಲಿ ಸೋಲು ಕಂಡಿರಬಹುದು… ಆದ್ರೇ, ಆಟವಿನ್ನು ಮುಗಿದಿಲ್ಲ”- ಗಮನ ಸೆಳೆದ ವಿನೋದ ಅಸೂಟಿ “ಸ್ಟೇಟಸ್”…
ರಾತ್ರಿಯಲ್ಲೂ ಹರಿದು ಬರುತ್ತಿರುವ ಜನಸಾಗರ
ವಿನೋದ ಅಸೂಟಿಯ ಜನಮನ್ನಣೆ ಸಾಬೀತು
ನವಲಗುಂದ: ವಿಧಾನಸಭಾ ಕ್ಷೇತ್ತದಲ್ಲೀಗ ಮೂಲ ಕಾಂಗ್ರೆಸ್ ಮತ್ತು ನಡುವೆ ಬಂದು ಅಧಿಕಾರ ಹಿಡಿದಿರುವ ಕಾಂಗ್ರೆಸ್ನವರ ನಡುವೆ ಭಿನ್ನಾಭಿಪ್ರಾಯಗಳು ಹೆಚ್ಚಾಗಿದ್ದು, ಅದು ಬೇರೆಯದ್ದೆ ಸ್ವರೂಪ ಪಡೆಯುವ ಲಕ್ಷಣಗಳು ಕಂಡು ಬರುತ್ತಿವೆ.
ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಯುವ ನಾಯಕ ವಿನೋದ ಅಸೂಟಿ ಅವರು ಟಗರಿನ ಕಾಳಗ ಇಟ್ಟುಕೊಂಡು ಜನಮನ ಸೆಳೆಯುತ್ತಿದ್ದಾರೆ. ಕ್ಷೇತ್ರದಲ್ಲಿ ಅವರ ಕಂ ಬ್ಯಾಕ್ ತೀವ್ರ ಸಂಚಲನ ಮೂಡಿಸಿದ್ದು, ಮೂಲ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಹುರುಪು ಬಂದಿದೆ.

ಇಂದು ಸಿಎಂ ಅವರು ಭಾಗವಹಿಸಿದ ಕಾರ್ಯಕ್ರಮದಲ್ಲಿಯೂ ಕಾಂಗ್ರೆಸ್ ನಾಯಕ ವಿನೋದ ಅಸೂಟಿಯವರನ್ನ ಕರೆಯದೇ ಇರುವುದು ಸರಕಾರಿ ಕಾರ್ಯಕ್ರಮ ಅನ್ನುವುದಕ್ಕಾ ಅಥವಾ ಇವರನ್ನ ದೂರಿಡಬೇಕು ಎಂಬುದಾ ಎಂಬ ಪ್ರಶ್ನೆ ಮೂಡಿದೆ.
ನವಲಗುಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನ ಕಟ್ಟಿ ಉಳಿಸಿದ್ದು ಯಾರೂ ಎಂಬುದನ್ನ ಗೊತ್ತಿದ್ದವರಿಗೆ ಹೇಳಬೇಕಾದ ಅವಶ್ಯಕತೆಯಿಲ್ಲ ಎಂಬುದನ್ನ ಪ್ರಜ್ಞಾವಂತರು ಅರಿತಿದ್ದಾರೆ.
