Posts Slider

Karnataka Voice

Latest Kannada News

ಶಿವಳ್ಳಿ-ಹೆಬ್ಬಳ್ಳಿಯಲ್ಲಿ “ಕಾಂಗ್ರೆಸ್ ಪ್ರತಿಭಟನೆ”- 100 ನಾಟೌಟ್…!

Spread the love

ಧಾರವಾಡ: ತೈಲ ಬೆಲೆ ನಿರಂತರವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲೂ ಕಾಂಗ್ರೆಸ್ ಹೋರಾಟಕ್ಕೆ ಮುಂದಾಗಿದ್ದು, ಇಂದು ತಾಲೂಕಿನ ಶಿವಳ್ಳಿ ಹಾಗೂ ಹೆಬ್ಬಳ್ಳಿ ಗ್ರಾಮದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಶಿವಳ್ಳಿ ಗ್ರಾಮದಲ್ಲಿನ ಪೆಟ್ರೋಲ್ ಬಂಕ್ ಮುಂದೆ ಹೋರಾಟಕ್ಕೀಳಿದ ಕಾರ್ಯಕರ್ತರು, ಕೇಂದ್ರ ಸರಕಾರ ತೈಲ ಬೆಲೆಯನ್ನ ಹೆಚ್ಚಿಸಿ, ಸಾಮಾನ್ಯ ಜನರಿಗೆ ಮತ್ತಷ್ಟು ಹೊರೆಯನ್ನ ಹೇರುತ್ತಿದೆ ಎಂದು ದೂರಿದರು.

ಮಾಜಿ ಸಚಿವ ವಿನಯ ಕುಲಕರ್ಣಿಯವರ ಆಪ್ತ ಸಹಾಯಕ ಪ್ರಶಾಂತ ಕೇಕರೆ ನೇತೃತ್ವದಲ್ಲಿ ನಡೆದ ಹೋರಾಟದಲ್ಲಿ ಗ್ರಾಮದ ಚೆನ್ನು ವಸ್ತ್ರದ, ಹಟೇಲಸಾಬ ನಾಯ್ಕರ, ಮಂಜುರಲಿ ತಾರಿಹಾಳ, ಪರಮೇಶ್ವರ ಕಾಳೆ, ವಿಠ್ಠಲ ಕಳ್ಳಿಮನಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ಹೆಬ್ಬಳ್ಳಿ ಗ್ರಾಮದಲ್ಲಿ ಜಿಲ್ಲಾ ಪಂಚಾಯತಿ ಸದಸ್ಯ ಮಟ್ಟಿ ನೇತೃತ್ವದಲ್ಲಿ ಹೋರಾಟ ನಡೆಯಿತು. ಗ್ರಾಮದ ಹಲವರು ಹೋರಾಟದಲ್ಲಿ ಭಾಗವಹಿಸಿ, ಕೇಂದ್ರದ ನೀತಿಯನ್ನ ಖಂಡಿಸಿದರು.


Spread the love

Leave a Reply

Your email address will not be published. Required fields are marked *