ಹುಬ್ಬಳ್ಳಿ “ಗುಂಡಿ ಬಳಿ ದೀಪ ಹಚ್ಚಿ” ಬಿಜೆಪಿಯವರಿಗೆ ಶುಭಾಶಯ ತಿಳಿಸಿದ “ರಜತ-ಪ್ರಕಾಶ” ಟೀಂ….

ಹುಬ್ಬಳ್ಳಿ: ನಗರದ ಪ್ರಮುಖ ಸ್ಥಳಗಳಲ್ಲಿ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿರುವ ರಸ್ತೆಯಂಚಿನಲ್ಲಿ ದೀಪ ಹಚ್ಚಿದ ಕಾಂಗ್ರೆಸ್ ಪ್ರಮುಖರು, ಬಿಜೆಪಿಗರ ಕಾರ್ಯವನ್ನ ಟೀಕಿಸಿದರು.
ಬಸವವನದ ಬಳಿಯಲ್ಲಿ ಹಲವು ತಿಂಗಳುಗಳಿಂದ ರಸ್ತೆ ಹದಗೆಟ್ಟಿದೆ. ಸಿಎಂ ಪ್ರತಿ ಬಾರಿಯೂ ಇದೇ ರಸ್ತೆಯಲ್ಲಿ ಸಂಚರಿಸುತ್ತಾರೆ. ಆದರೂ, ಇದು ಸುಧಾರಿಸುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಹೋರಾಟದ ಹೊಸ ಸ್ವರೂಪದ ಸಂಪೂರ್ಣ ವೀಡಿಯೋ ಇಲ್ಲಿದೆ. ಮಾಜಿ ಮೇಯರ್ ಪ್ರಕಾಶ ಕ್ಯಾರಕಟ್ಟಿ, ರಜತ ಉಳ್ಳಾಗಡ್ಡಿಮಠ ಮಾತಾಡಿದ್ದಾರೆ ನೋಡಿ…
ರಸ್ತೆಯಲ್ಲಿ ದೀಪ ಹಚ್ಚಿದ ನಂತರ ಅಲ್ಲೇ ನಿಂತು ಬಿಜೆಪಿ ಮುಖಂಡರಿಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನ ರಜತ ಉಳ್ಳಾಗಡ್ಡಿಮಠ ತಿಳಿಸಿದ್ದು, ವಿಶೇಷವಾಗಿತ್ತು.