Posts Slider

Karnataka Voice

Latest Kannada News

ಬಿಜೆಪಿಯವರನ್ನ ನಡು ನೀರಲ್ಲಿ ಮುಳುಗಿಸಿದ ಹುಬ್ಬಳ್ಳಿ ಕಾಂಗ್ರೆಸ್ಸಿಗರು…!

Spread the love

ಹುಬ್ಬಳ್ಳಿ: ಸ್ಮಾರ್ಟ್ ಸಿಟಿಯನ್ನಾಗಿ ಮಾಡುವುದಾಗಿ ಹೇಳಿ ತಗ್ಗು-ಗುಂಡಿಗಳಿಂದಲೇ ತುಂಬಿರುವ ರಸ್ತೆಯಲ್ಲಿಯೇ ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷರ ನೇತೃತ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಅವರ ಕಟೌಟ್ ಗೆ ಮಾಲೆ ಹಾಕಿ ಸತ್ಕರಿಸಲಾಯಿತು.

ವಿಶೇಷವಾದ ರೀತಿಯಲ್ಲಿ ಹೋರಾಕ್ಕೀಳಿದ ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ ಅವರು, ಹದಗೆಟ್ಟಿರುವ ರಸ್ತೆಯನ್ನ ಯಾವಾಗ ಸರಿ ಮಾಡುವುದು ಎಂಬುದನ್ನ ಪ್ರಶ್ನಿಸಲು ಹೋರಾಟ ನಡೆಸಿದರು.

ತಗ್ಗು ಪ್ರದೇಶದಲ್ಲಿ ನಿಂತಿದ್ದ ನೀರಿನಲ್ಲಿ ಕಾಗದದ ದೋಣಿಗಳನ್ನ ಬಿಟ್ಟು ಕ್ಷೇತ್ರದ ಜನರನ್ನ ಕಾಪಾಡಿ ಎಂದು ಕೇಳಿಕೊಂಡರು. ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಹಣ ಹರಿಯುತ್ತಿದೆ ಎಂದು ಹೇಳಲಾಗುತ್ತಿದೆ ಹೊರತಾಗಿ, ರಸ್ತೆಗಳು ಮಾತ್ರ ಸುಧಾರಣೆ ಕಾಣುತ್ತಿಲ್ಲವೆಂದು ಆಕ್ರೋಶವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಮೇಯರ್ ವೆಂಕಟೇಶ ಮೇಸ್ತ್ರಿ, ಮಾಲತೇಶ ಕುಲಕರ್ಣಿ, ಮಲ್ಲಿಕಾರ್ಜುನ ಯಾತಗೇರಿ, ಸುನೀಲ ಮಠಪತಿ, ಮಣಿಕಂಠ ಗುಡಿಹಾಳ ಭಾಗವಹಿಸಿದ್ದರು.


Spread the love

Leave a Reply

Your email address will not be published. Required fields are marked *