Posts Slider

Karnataka Voice

Latest Kannada News

ಕಾಂಗ್ರೆಸ್ ಅಧ್ಯಕ್ಷೆ ದೀಪಾ ಗೌರಿ ಜೊತೆ ಕಾಣಿಸಿಕೊಳ್ಳುತ್ತಿದ್ದ ಮಹಿಳೆಯಿಂದ ವಂಚನೆ…!

1 min read
Spread the love

Exclusive audio

ಹುಬ್ಬಳ್ಳಿ: ನಗರದ ಹಲವರಿಗೆ ಮನೆ ಹಾಗೂ ಲೋನ್ ಕೊಡಿಸುವುದಾಗಿ ವಂಚನೆ ಮಾಡಿ ಜನರು ಕಣ್ಣೀರಿಡುವಂತೆ ಮಾಡಿರುವ ಘಟನೆಯೊಂದು ನಡೆದಿದ್ದು, ಧಾರವಾಡ ಮಹಾನಗರ ಜಿಲ್ಲಾಧ್ಯಕ್ಷೆ ದೀಪಾ ಗೌರಿಯವರ ಜೊತೆ ಕಾಣಿಸಿಕೊಳ್ಳುತ್ತಿದ್ದ ಮಹಿಳೆಯೇ ಇದಕ್ಕೇಲ್ಲ ಕಾರಣವೆಂದು ಹೇಳಲಾಗಿದೆ.

with zameer ahmad and deepa gouri… accused poornima

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವುಕುಮಾರ ಅವರ ಕಪ್ಪು ಹಣವನ್ನ ನಾವೂ ಲೋನ್ ಮುಖಾಂತರ ಕೊಡುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತ ಜನರನ್ನ ವಂಚನೆ ಮಾಡಿರುವ ಮಹಿಳೆಯನ್ನ ಹಳೇಹುಬ್ಬಳ್ಳಿ ರಾಮನಗರದ ಪೂರ್ಣಿಮಾ ಮಹೇಶ ಸವದತ್ತಿ ಎಂದು ಗುರುತಿಸಲಾಗಿದ್ದು, ಇವರ ವಿರುದ್ಧ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

fir copy

ಕಾಂಗ್ರೆಸ್ ಪಕ್ಷದ ಪ್ರಮುಖರೊಂದಿಗೆ ಕಾಣಿಸಿಕೊಂಡು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವುಕುಮಾರ ಕಪ್ಪು ಹಣವನ್ನ ನಾವಿಲ್ಲಿ ಲೋನ್ ಮುಖಂತಾರ ಕೊಡುತ್ತಿದ್ದೇವೆ ಎಂದು ನಂಬಿಸುವ ಆಡೀಯೋ ಕೂಡಾ ವೈರಲ್ ಆಗಿದೆ. ಬಡವರನ್ನ ಕಣ್ಣೀರಿಡುವಂತೆ ಮಾಡಿರುವ ಮಹಿಳೆಯ ಬಗ್ಗೆ ದೂರು ದಾಖಲಾಗಿದ್ದು, ಹಳೇಹುಬ್ಬಳ್ಳಿ ಠಾಣೆ ಪೊಲೀಸರು ಮುಂದಿನ ಕಾನೂನು ಕ್ರಮವನ್ನ ಜರುಗಿಸುತ್ತಿದ್ದಾರೆ.

ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ದೀಪಾ ಗೌರಿಯವರ ಜೊತೆ ಕಾಣಿಸಿಕೊಳ್ಳುತ್ತಿದ್ದ ಇಂತವರನ್ನ ಸ್ವತಃ ಹಿಡಿದು ಪೊಲೀಸರಿಗೆ ಒಪ್ಪಿಸಲು ದೀಪಾ ಗೌರಿಯವರಾದರೂ ಮುಂದಾಗಿ, ಪಕ್ಷದ ಘನತೆಯನ್ನ ಉಳಿಸಿಕೊಳ್ಳಬೇಕಿದೆ. ಇಲ್ಲದಿದ್ದರೇ, ಹಣ ಕಳೆದುಕೊಂಡ ಬಡವರ ಶಾಪ ಯಾರನ್ನೂ ಬಿಡದು.. ಅಲ್ಲವೇ..!


Spread the love

Leave a Reply

Your email address will not be published. Required fields are marked *