Posts Slider

Karnataka Voice

Latest Kannada News

ಧಾರವಾಡ ಡಿಸಿ ಆಫೀಸ್ ಎದುರಿಗೆ ಒಲ್ಲೆ ಹೂಡಿ, ಉಪ್ಪಿಟ್ಟು-ಚಾ …!

1 min read
Spread the love

ಧಾರವಾಡ: ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದ ಇಂದು ಎಂದಿನಂತಿರಲಿಲ್ಲ. ಅಲ್ಲಿನ ವಾತಾವರಣ ಬದಲಾಗಿಯಾಗಿತ್ತು. ಕೆಲವರು ಬಂದು ಸುಮ್ಮನೆ ಒಲೆಯನ್ನ ಹೂಡತೊಡಗಿದ್ರು. ನೋಡ ನೋಡತ್ತಿದ್ದ ಹಾಗೇ, ಬಿಸಿ ಬಿಸಿ ಉಪ್ಪಿಟ್ಟು-ಚಾ ರೆಡಿಯಾಗಿಯೇ ಬಿಟ್ಟಿತ್ತು.. ಇದೇಲ್ಲವೂ ನಡೆದಿದ್ದು ಯಾಕೆ ಎಂಬುದನ್ನ ವಿವರವಾಗಿ ಓದಿ ನೋಡಿ..

protest video

ಕೇಂದ್ರ ಸರಕಾರದಿಂದ ಬೆಲೆ ಏರಿಕೆ ಹೆಚ್ಚಾಗುತ್ತಿದೆ. ಗ್ಯಾಸ್ ಸಿಲೆಂಡರ್ ಬಳಕೆ ಮಾಡಲು ಆಗುತ್ತಿಲ್ಲವೆಂದು ಮಾರ್ಮಿಕವಾಗಿ ತಿಳಿಸಲು, ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಒಲೆ ಹೂಡಿ, ಕಟ್ಟಿಗೆಯಿಂದ ಉಪಹಾರ ಮಾಡಿದ್ರು.

ಬೆಲೆ ಏರಿಕೆಯಿಂದ ಬಡವರು ಪರಿತಪಿಸುತ್ತಿದ್ದಾರೆ. ಸುಖಾಸುಮ್ಮನೆ ತೊಂದರೆ ಕೊಡಲಾಗುತ್ತಿದೆ. ದಿನನಿತ್ಯದ ಜೀವನವನ್ನ ನಡೆಸುವುದು ದುಸ್ತರವಾಗುತ್ತಿದೆ ಎಂದು ಹೇಳಿದ ಪ್ರತಿಭಟನಾನಿರತ ಮಹಿಳೆಯರು, ಕೇಂದ್ರ ನೀತಿಯನ್ನ ಕಟುವಾಗಿ ಟೀಕಿಸಿದರು.

ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೀಪಾ ಗೌರಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ರು.


Spread the love

Leave a Reply

Your email address will not be published. Required fields are marked *