Posts Slider

Karnataka Voice

Latest Kannada News

ಮಸೀದಿಯಲ್ಲಿ ಬರ್ತಡೇ ಆಚರಿಸಿಕೊಂಡ ಅಲ್ತಾಫ್ ನವಾಜ ಕಿತ್ತೂರ…!

Spread the love

ಹುಬ್ಬಳ್ಳಿ: ಕೊರೋನಾ ನಿಯಮಗಳನ್ನ ಮೀರಿ ಅಂಜುಮನ್ ಸಂಸ್ಥೆಯ ಉಪಾಧ್ಯಕ್ಷ ಹಳೇಹುಬ್ಬಳ್ಳಿ ಅಲ್ತಾಪನಗರದ ಮಸೀದಿಗೆ ಅಂಟಿಕೊಂಡಿರುವ ಶೆಡ್ದಿನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ವೀಡಿಯೋ ವೈರಲ್ ಆಗಿದ್ದು, ನಿಯಮ ಉಲ್ಲಂಘನೆ ಆರೋಪದಲ್ಲಿ ಪೊಲೀಸರು ಇವರ ಮೇಲೆ ಕ್ರಮ ಜರುಗಿಸಬೇಕಿದೆ.

ಮಸೀದಿಯಲ್ಲಿ ‘ಇಶಾ’ ನಮಾಜ್ ಮುಗಿದ ಮೇಲೆ ಹಲವರನ್ನ ಸೇರಿಸಿಕೊಂಡು ಸಾಮಾಜಿಕ ಅಂತರವನ್ನ ಮರೆತು ಮಾಸ್ಕ್ ಹಾಕಿಕೊಳ್ಳದೇ ಬರ್ತಡೇ ಆಚರಿಸಿಕೊಂಡಿದ್ದು ಅಲ್ತಾಪನವಾಜ್ ಕಿತ್ತೂರ ಎಂಬ ಮಹಾನಗರ ಪಾಲಿಕೆ ಮಾಜಿ ಸದಸ್ಯ ಹಾಗೂ ಹಾಲಿ ಅಂಜುಮನ್ ಸಂಸ್ಥೆಯ ಉಪಾಧ್ಯಕ್ಷ.

ಕಳೆದ ನಾಲ್ಕೈದು ದಿನದ ಹಿಂದೆ ಧಾರವಾಡದಲ್ಲಿ ರೌಡಿ ಷೀಟರ್ ವೊಬ್ಬ ಬರ್ತಡೇ ಆಚರಿಸಿಕೊಂಡ ಹಿನ್ನೆಲೆಯಲ್ಲಿ ಆತನ ಮೇಲೆ ಪ್ರಕರಣ ದಾಖಲು ಮಾಡಲಾಗಿತ್ತು. ಇದೀಗ ಇವರ ಮೇಲೆ ಕ್ರಮವನ್ನ ಯಾವ ಥರದಲ್ಲಿ ತೆಗೆದುಕೊಳ್ಳುತ್ತಾರೆ ಎಂಬುದನ್ನ ಕಾದು ನೋಡಬೇಕಿದೆ.

ಸಾರ್ವಜನಿಕ ಜೀವನದಲ್ಲಿ ಇರುವ ಮುಖಂಡರ ಮುಖವಾಡ ಹೊಂದಿರುವ ಇವರಿಗೆ ಯಾವ ಕಾನೂನು ಲೆಕ್ಕಕ್ಕೆ ಇಲ್ಲದಂತಾಗಿದ್ದು, ಪೊಲೀಸರು ಇಂತವರ ವಿರುದ್ಧ ಕ್ರಮವನ್ನ ಜರುಗಿಸಬೇಕಿದೆ.


Spread the love

Leave a Reply

Your email address will not be published. Required fields are marked *