ಆರಕ್ಷಕರಿಗೆ ಆಪ್ತರಕ್ಷಕನಾದ ಕಾಂಗ್ರೆಸ್ ಮುಖಂಡ ರಜತ ಉಳ್ಳಾಗಡ್ಡಿಮಠ…!
1 min readಹುಬ್ಬಳ್ಳಿ: ಕೊರೋನಾ ಪ್ರಕರಣಗಳು ಪ್ರತಿದಿನವೂ ಹೆಚ್ಚುತ್ತಿದ್ದರೂ, ನಿರಂತರವಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಪೊಲೀಸರಿಗೆ ಹಲವು ರೀತಿಯ ಸಾಧನಗಳನ್ನ ಕಾಂಗ್ರೆಸ್ ಮುಖಂಡ ರಜತ ಉಳ್ಳಾಗಡ್ಡಿಮಠ ಇಂದು ವಿತರಣೆ ಮಾಡಿದರು.
ಕಮೀಷನರೇಟ್ ವ್ಯಾಪ್ತಿಯ ಪೊಲೀಸರಿಗಾಗಿ ನೀಡಿದ ವಸ್ತುಗಳನ್ನ ಎಸಿಪಿ ವಿನೋದ ಮುಕ್ತೆದಾರ ಅವರಿಗೆ ನೀಡುವ ಮೂಲಕ, ಪೊಲೀಸರ ಆರೋಗ್ಯಕ್ಕೆ ಕಾಂಗ್ರೆಸ್ ಮುಖಂಡ ರಜತ ಉಳ್ಳಾಗಡ್ಡಿಮಠ ಒತ್ತು ನೀಡಿದರು.
ರಜತ ಹೇಳಿಕೊಂಡಿದ್ದಿಷ್ಟು…!
ಕೊರೋನಾ ಸೋಂಕು ಹರಡದಂತೆ, ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ರೂಪಿಸಿರುವ ನಿಯಮಗಳನ್ನು ಜನರು ಕಟ್ಟು ನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಿರುವ ಪೊಲೀಸರ ಕಾರ್ಯ ಶ್ಲಾಘನೀಯ. ಹಾಗೆಯೇ, ಈ ಆರಕ್ಷಕರ ಆರೋಗ್ಯ ಕಾಳಜಿಯೂ ಅಷ್ಟೇ ಮುಖ್ಯವಾದುದು.
ಈ ನಿಟ್ಟಿನಲ್ಲಿ ಹುಬ್ಬಳ್ಳಿ ನಗರದ ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ
• 15 ಪಿಪಿಇ ಕಿಟ್
• 130 ಫೇಸ್ ಶೀಲ್ಡ್
• 2 ಥರ್ಮೋಮೀಟರ್
• 300 ಗ್ಲೌವ್ಸ್
• 1000 N95 ಮಾಸ್ಕ್ಗಳನ್ನು ವಿತರಿಸಲಾಯಿತು.
ನಮ್ಮ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ಶ್ರಮಿಸುತ್ತಿದ್ದಾರೆ. ಅವರಿಗೆ ಸಾರ್ವಜನಿಕರು ಸಂಪೂರ್ಣ ಬೆಂಬಲ ನೀಡಬೇಕೆಂದು ಮನವಿ ಮಾಡುತ್ತೇನೆ.
||ಸರ್ವೇಜನಾ ಸುಖೀನೋ ಭವಂತು||
ನಿಮ್ಮ ಹುಬ್ಬಳ್ಳಿ • ನಿಮ್ಮ ರಜತ್