ಅಂಚಟಗೇರಿಯಲ್ಲಿ ಚಿರತೆ ಕಂಡಿದ್ದು ಸತ್ಯ: ವೃದ್ಧೆಯ ಮೇಲೆ ಹಲ್ಲೆ ನಡೆದದ್ದು ಸುಳ್ಳು…!

ಧಾರವಾಡ: ಸಾಮಾಜಿಕ ಜಾಲತಾಣದಲ್ಲಿ ಹಲವರು ಹಲವು ರೀತಿಯಲ್ಲಿ ಸುಳ್ಳುಗಳನ್ನ ಹಬ್ಬಿಸುತ್ತಿದ್ದು, ಇಂದು ಮತ್ತೊಂದು ವೈರಲ್ ವೀಡಿಯೋ ಧಾರವಾಡ ಜಿಲ್ಲೆಯವರನ್ನ ಕೆಲ ಕ್ಷಣ ಗಾಬರಿಪಡಿಸಿತ್ತು. ಆದರೆ, ವೈರಲ್ ಆಗಿರೋ ಸಿಸಿಟಿವಿ ದೃಶ್ಯ ಹಾಗೂ ಅಜ್ಜಿಯ ಪೋಟೋಗಳು ಇಲ್ಲಿವೂ ಅಲ್ಲವೇ ಅಲ್ಲ.
https://www.facebook.com/100045805057267/videos/381856756925773/
ನಿನ್ನೆಯಷ್ಟೇ ಹುಬ್ಬಳ್ಳಿ ಪ್ರಾದೇಶಿಕ ವಲಯದ ಅರಣ್ಯ ಅಧಿಕಾರಿಗಳು ಅಂಚಟಗೇರಿ, ಚೆನ್ನಾಪುರ ಹಾಗೂ ಕಟ್ನೂರ ಗ್ರಾಮ ಪಂಚಾಯತಿ ಪಿಡಿಓಗಳಿಗೆ ಪತ್ರವನ್ನ ಬರೆದು, ಅಂಚಟಗೇರಿ ಮತ್ತು ಬುಡ್ನಾಳ ಗ್ರಾಮದಲ್ಲಿ ಚಿರತೆ ಕಂಡು ಬಂದಿದೆ ಎಂದು ತಿಳಿಸಿ, ಜಾಗೃತೆ ವಹಿಸಲು ಸೂಚನೆ ನೀಡಲಾಗಿತ್ತು.

ಕಿಡಗೇಡಿಗಳು ಈ ಪತ್ರದೊಂದಿಗೆ ವೃದ್ಧೆಯ ಮೇಲೆ ಚಿರತೆ ನಡೆಸಿರುವ ಹಲ್ಲೆಯ ಸಿಸಿಟಿವಿ ದೃಶ್ಯ ಹಾಗೂ ಅಜ್ಜಿಗೆ ಆಗಿರುವ ಗಾಯದ ಪೋಟೊಗಳನ್ನ ವೈರಲ್ ಮಾಡಿ, ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸುವ ಪ್ರಯತ್ನಕ್ಕೆ ಇಳಿದಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆಯವರ ಸ್ಪಷ್ಟಿಕರಣ ಇಲ್ಲಿದೆ ನೋಡಿ..
ಸುಳ್ಳು ವದಂತಿಗಳನ್ನು ನಂಬದಿರಿ; ಚಿರತೆ ಕಂಡುಬಂದಲ್ಲಿ ತಕ್ಷಣ ಸ್ಥಳಿಯ ಗ್ರಾಮ ಪಂಚಾಯತ, ಅರಣ್ಯ ಇಲಾಖೆಗೆ ತಿಳಿಸಿ: ಡಿಎಪ್ಓ ಯಶಪಾಲ ಕ್ಷೀರಸಾಗರ
ಹುಬ್ಬಳ್ಳಿ: ಹುಬ್ಬಳ್ಳಿಯ ಗಿರಿಯಾಲ,ಕಟನೂರ, ಗುಡಿಸಾಗರ, ಅಂಚಟಗೇರಿ, ಬೂದನಗುಡ್ಡ ಸೇರಿದಂತೆ ಆ ಭಾಗದ ಸುಮಾರು 1400 ಹೆಕ್ಟೇರ್ ಭೂಮಿಯಲ್ಲಿ ರಕ್ಷಿತ ಅರಣ್ಯ ( ಯಲ್ಲಾಪುರ,ಶಿರಸಿ ಭಾಗಕ್ಕೆ ಹೊಂದಿಕೊಂಡಂತೆ) ಪ್ರದೇಶವಿದೆ. ಚಿರತೆ ಸೇರಿದಂತೆ ವಿವಿಧ ಕಾಡು ಪ್ರಾಣಿಗಳು ಈ ರಕ್ಷಿತ ಅರಣ್ಯದಲ್ಲಿ ಇರುವುದು ಸಹಜ.
ಹುಬ್ಬಳ್ಳಿಯ ಗುಡಿಸಾಗರ, ಬೂದನಗುಡ್ಡ, ಅಂಚಟಗೇರಿ ಸೇರಿದಂತೆ ಇತರ ಭಾಗದಲ್ಲಿ ಇಲ್ಲಿಯವರೆಗೆ ಮತ್ತು ನಿನ್ನೆ ದಿನ ಸಹ ಚಿರತೆ ಕಂಡುಬಂದ ಬಗ್ಗೆ ಅರಣ್ಯ ಇಲಾಖೆಗೆ ಯಾವುದೇ ರೀತಿಯ ಮಾಹಿತಿ ಬಂದಿರುವದಿಲ್ಲ.
ಆದಾಗ್ಯೂ ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳು ಆ ಭಾಗದಲ್ಲಿ ನಿರಂತರ ಪರಿಶೀಲನೆ, ಗಸ್ತು ಮಾಡುತ್ತಿದ್ದಾರೆ.
ಕಾಡು ಪ್ರಾಣಿ, ಚಿರತೆ ದಾಳಿ ಕುರಿತು ಬೇರೆ ರಾಜ್ಯ, ಪ್ರದೇಶಕ್ಕೆ ಸಂಬಂದಿಸಿದ ಪೋಟೊ ಮತ್ತು ವಿಡಿಯೋ ವನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು, ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನಿಸುತ್ತಿದ್ದಾರೆ. ಇದರಿಂದ ಸಾರ್ವಜನಿಕರು ಭಯಬೀತರಾಗುತ್ತಾರೆ. ಆದ್ದರಿಂದ ಯಾರು ಸಹ ಇಂತಹ ಪೆಕ್ ಸಂದೇಶಗಳನ್ನು ಇತರರಿಗೆ ಕಳಿಸುವ, ಪ್ರಚುರಪಡಿಸಿ ಮೂಲಕ ಸಾರ್ವಜನಿಕರಲ್ಲಿ ಭಯ ಮೂಡಿಸದಂತೆ ಡಿಎಪ್ಓ ಮನವಿ ಮಾಡಿದ್ದಾರೆ.
ಇಂತಹ ಫೇಕ್ (fake) ಸಂದೇಶಗಳನ್ನು ಸಾರ್ವಜನಿಜರು ನಂಬದಂತೆ ಮತ್ತು ಇತರರಿಗೆ ಪಾರ್ ವರ್ಡ್ ಮಾಡದಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.