ಮನಸೂರಿನಲ್ಲಿ “ನಸುಗುನ್ನಿ” ಚಿರತೆಯಿಂದ “ಮಾರಣಹೋಮ”- ಎಚ್ಚರಗೊಳ್ಳದ ಅರಣ್ಯಾಧಿಕಾರಿಗಳು… ಸ್ಥಳಕ್ಕೆ “ಸೂಪರ್ಕಾಪ್” ವಿಸಿಟ್…!!!

ಧಾರವಾಡ: ಕಳೆದ ಹದಿನೈದು ದಿನಗಳಿಂದ ಕಣ್ಣಾಮುಚ್ಚಾಲೆ ಆಟವಾಡುತ್ತಿರುವಂತೆ ಕಂಡು ಬರುತ್ತಿರುವ ಚಿರತೆಯೊಂದು ಮತ್ತೆ ಮೂರು ಆಕಳು ಕರುವಿನ ಜನ್ಮ ತೆಗೆದ ಘಟನೆ ತಡರಾತ್ರಿ ಸಂಭವಿಸಿದೆ.
ದೀಕ್ಷಿತ ಎನ್ನುವವರಿಗೆ ಸೇರಿದ ಡೇರಿಯಲ್ಲಿ ಘಟನೆ ನಡೆದಿದ್ದು, ಸ್ಥಳೀಯರು ಅರಣ್ಯ ಇಲಾಖೆಯ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.
ವೀಡಿಯೋ…
ಸ್ಥಳಕ್ಕೆ ಧಾರವಾಡ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಭರಮನಿ, ಧಾರವಾಡ ಗ್ರಾಮೀಣ ಸಿಪಿಐ ಶಿವಾನಂದ ಕಮತಗಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು.