ಕವಲಗೇರಿಯಲ್ಲಿ ಸೆರೆಯಾಯ್ತು ಚಿರತೆ- ಕಣ್ಣಾಮುಚ್ಚಾಲೆ ಆಟಕ್ಕೆ ತೆರೆ…!

ಧಾರವಾಡ: ಕಳೆದ ಹಲವು ದಿನಗಳಿಂದ ತಲೆ ನೋವಾಗಿದ್ದ ಚಿರತೆಯೂ ಇಂದು ಬೆಳಗಿನ ಜಾವ ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದಲ್ಲಿ ದೊರೆತಿದೆ.

ಉಪ್ಪಾರ ಎಂಬುವವರ ಕಬ್ಬಿನ ಹೊಲದಲ್ಲಿ ಇಟ್ಟಿದ್ದ ಬೋನಿನಲ್ಲಿ ಚಿರತೆ ಸಿಕ್ಕಿ ಬಿದ್ದಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಸೆಪ್ಟಂಬರ್ 19ರಿಂದ ಕಂಡು ಬಂದಿದ್ದ ಚಿರತೆ ಗ್ರಾಮಸ್ಥರ ನೆಮ್ಮದಿಯನ್ನ ಹಾಳು ಮಾಡಿತ್ತು. ಅಷ್ಟೇ ಅಲ್ಲ, ಅರಣ್ಯ ಇಲಾಖೆಯ ನೂರಾರೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.