Posts Slider

Karnataka Voice

Latest Kannada News

ಎಲ್ಲೂ ಚಿರತೆ ಸಿಕ್ಕಿಲ್ಲ: ಬೋನು, ಡ್ರೋಣು, ಬಂದೂಕು ಹಿಡಿದುಕೊಂಡು ಅಲೆದದ್ದೇ ಅಲೆದದ್ದು…!

1 min read
Spread the love

ಧಾರವಾಡ:  ಜಿಲ್ಲೆಯ ಮೂರು ಭಾಗದಲ್ಲಿ ಚಿರತೆಯ ಕುರುಹುಗಳು ಸಿಕ್ಕರೂ, ಅದು ಮಾತ್ರ ಸಿಗದೇ ಬಹುತೇಕರನ್ನ ಹೈರಾಣ ಮಾಡುತ್ತಿರುವುದು ಮುಂದುವರೆದಿದೆ.

ಇಂದಿನ ಕಾರ್ಯಾಚರಣೆಯ ದೃಶ್ಯಗಳು..

ಹುಬ್ಬಳ್ಳಿಯ ನೃಪತುಂಗ ಬೆಟ್ಟದ ಸುತ್ತಮುತ್ತ, ಹಾರೋಬೆಳವಡಿ ಪಂಚಾಯತಿ ವ್ಯಾಪ್ತಿಯ ಕಬ್ಬೇನೂರು ಹಾಗೂ ಕವಲಗೇರಿಯ ಉಪ್ಪಾರರ ಹೊಲದಲ್ಲಿ ಕಂಡು ಬಂದ ಚಿರತೆಯ ಹೆಜ್ಜೆ ಗುರುತುಗಳು ಅರಣ್ಯಾಧಿಕಾರಿಗಳ ನಿದ್ದೆಗೆಡಿಸಿದೆಯಲ್ಲದೇ, ಸಾರ್ವಜನಿಕರಿಗೆ ಆತಂಕವನ್ನ ಮುಂದುವರೆಸಿದೆ.

ಇಂದು ಕೂಡಾ ಕವಲಗೇರಿ ಪ್ರದೇಶದಲ್ಲಿ ಅಧಿಕಾರಿಗಳು ಹಂದಿಯಿದ್ದ ಬೋನು ಹಾಕಿಕೊಂಡು ಅಲೆದಾಡುವ ಸ್ಥಿತಿ ಮುಂದುವರೆದಿದೆ. ಕೆಲವರ ಹೊಲದಲ್ಲಿ ಚಿರತೆಯ ಹೆಜ್ಜೆ ಗುರುತುಗಳು ಸಿಗುತ್ತಿವೆ ಹೊರತಾಗಿ, ಯಾರಿಗೂ ನಿಖರವಾಗಿ ಕಾಣದೇ ಇರುವುದು ಮತ್ತಷ್ಟು ಆತಂಕ ಹೆಚ್ಚಿಸಿದೆ.

ವದಂತಿ..

fake photo

ಕೆಲವರು ಹಳೇಯ ಪೋಟೊವೊಂದನ್ನ ವೈರಲ್ ಮಾಡಿ, ಅದನ್ನೇ ಪಾರ್ವರ್ಡ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಕವಲಗೇರಿಯ ಬಳಿ ಚಿರತೆಯನ್ನ ಹಿಡಿದಿದ್ದಾರೆಂದು ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ.


Spread the love

Leave a Reply

Your email address will not be published. Required fields are marked *