Posts Slider

Karnataka Voice

Latest Kannada News

ಸದ್ದಿಲ್ಲದೇ ಚಿರತೆಯನ್ನ ಕಾಡಿಗಟ್ಟಿದ ಧಾರವಾಡದ “ಬಾಹುಬಲಿ”- ಕರ್ನಾಟಕವಾಯ್ಸ್.ಕಾಂ ಎಕ್ಸಕ್ಲೂಸಿವ್….

Spread the love

ಸೆಪ್ಟಂಬರ್ 12ರಂದು ಲಿಂಗನಕೊಪ್ಪದ ಬಳಿ ಕಂಡು ಬಂದಿದ್ದ ಚಿರತೆಯನ್ನ ಧೈರ್ಯದಿಂದ ಕಾಡಿನತ್ತ ಹೋಗಿಸುವಲ್ಲಿ ಯಶಸ್ವಿಯಾಗಿ, ಸುಮಾರು 8 ಸಾವಿರ ಜನ ನೆಮ್ಮದಿ ಕಾಪಾಡಿದ್ದು, ಇದೇ ವೀರ ಬಾಹುಬಲಿ..

ಧಾರವಾಡ: ಜಿಲ್ಲೆಯ ಎರಡ್ಮೂರು ಭಾಗಗಳಲ್ಲಿ ಚಿರತೆ ಕಂಡು ಬಂದು ಬಹುತೇಕರನ್ನ ಹೈರಾಣ ಮಾಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಆದರೆ, ಯಾರಿಗೂ ಗೊತ್ತಿಲ್ಲದ ವಿಷಯವೊಂದನ್ನ ಕರ್ನಾಟಕವಾಯ್ಸ್.ಕಾಂ ನಿಮಗೆ ನೀಡುತ್ತಿದೆ.

ಕಲಘಟಗಿ ತಾಲೂಕಿನ ಲಿಂಗನಕೊಪ್ಪ ಗ್ರಾಮದ ನೀಲಗಿರಿ ಕಾಡಿನ ತೋಪಿನಲ್ಲಿ ಕಂಡು ಬಂದಿದ್ದ ಚಿರತೆಯನ್ನ ಏಕಾಂಗಿಯಾಗಿ ಕಾಡಿಗಟ್ಟುವಲ್ಲಿ ಫಾರೆಸ್ಟ್ ಗಾರ್ಡ್ ವೊಬ್ಬರು ಯಶಸ್ವಿಯಾಗಿದ್ದಾರೆ.

ಫಾರೆಸ್ಟ್ ಗಾರ್ಡ್ ಆಗಿರುವ ಹಸನಸಾಬ ಗೌಳಿ ಎಂಬುವವರೇ ಯಾರಿಗೂ ಗೊತ್ತಾಗದ ಹಾಗೇ ಚಿರತೆಯನ್ನ ಕಾಡಿಗೆ ಹೋಗುವಂತೆ ಮಾಡುವಲ್ಲಿ ಹಸನಸಾಬ ಮಾಡಿದ್ದಾರೆ.

ಲಿಂಗನಕೊಪ್ಪ ಗ್ರಾಮವೂ ಸೇರಿದಂತೆ ಗಂಭ್ಯಾಪುರ, ಜಿ.ಬಸನಕೊಪ್ಪ, ಅಂಬ್ಲಿಕೊಪ್ಪ, ಕಳಸನಕೊಪ್ಪ, ನೀರಸಾಗರ ಸುತ್ತಮುತ್ತ ಈ ಸುದ್ದಿ ಹರಡಿದ್ದರೇ, ಈ ಭಾಗದಲ್ಲಿಯೂ ಆತಂಕ ಮನೆ ಮಾಡುತ್ತಿತ್ತು.

ಇದೇಲ್ಲವನ್ನೂ ಮರೆಸುವ ರೀತಿಯಲ್ಲಿ ಏಕಾಂಗಿಯಾಗಿ ಚಿರತೆಯನ್ನ ಕಾಡಿಗಟ್ಟಿ, ಮೇಲಾಧಿಕಾರಿಗಳಿಗೆ ಹೇಳಿದ ‘ವೀರ ಬಾಹುಬಲಿ’ಗೆ ನಮ್ಮದೊಂದು ಸಲಾಮ್..


Spread the love

Leave a Reply

Your email address will not be published. Required fields are marked *