Posts Slider

Karnataka Voice

Latest Kannada News

ಮಗುವನ್ನ ಹೊತ್ತೊಯ್ದು ತಿಂದಿದ್ದ ಚಿರತೆ ಸೆರೆ: ನೆಮ್ಮದಿಯ ನಿಟ್ಟುಸಿರುವ ಬಿಟ್ಟ ಜನತೆ

1 min read
Spread the love

ರಾಮನಗರ: ಮಗುವನ್ನು ಹೊತ್ತೊಯ್ದು ತಿಂದು ಜನರಲ್ಲಿ ಭಯ ಸೃಷ್ಠಿ ಮಾಡಿದ್ದ ಚಿರತೆ ಕೊನೆಗೂ ಸೆರೆಯಾಗಿದೆ. ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಕದರಯ್ಯನ ಪಾಳ್ಯದಲ್ಲಿ ಅರಣ್ಯ ಇಲಾಖೆ  ಇರಿಸಲಾಗಿದ್ದ ಬೋನ್ ಗೆ ಚಿರತೆ ಬಿದ್ದಿದೆ. ಸೆರೆಯಾದ ಚಿರತೆ ನೋಡಲು ಜನರು ಮುಗಿಬಿದ್ದಿದ್ದಾರೆ. ಮಗು ತಿಂದ ಬಳಿಕ ಜನರು ಮನೆಯಿಂದ ಹೊರಗೆ ಬಂದು ಓಡಾಡಲು ಹೆದರುವ ಪರಿಸ್ಥಿತಿಯಿತ್ತು. ಕೊರೋನಾ ವೈರಸ್ ಜೊತೆಗೆ  ಚಿರತೆ ಕಾಟದಿಂದ ಜನರು ಕಂಗಾಲಾಗಿದ್ದರು. ಅರಣ್ಯ ಇಲಾಖೆಯ ಸತತ ಪ್ರಯತ್ನದಿಂದ ಚಿರತೆ ಸೆರೆಯಾಗಿದೆ. ಇದೇ ಗ್ರಾಮದ ಮೂರು ವರ್ಷದ ಮಗು ಹೇಮಂತನನ್ನು ಚಿರತೆ  ತಿಂದು ಹಾಕಿತ್ತು. ಸದ್ಯ ಚಿರತೆ ಸೆರೆಯಿಂದ ಜನರಲ್ಲಿದ್ದ ಭಯ ದೂರವಾಗಿದೆ.


Spread the love

Leave a Reply

Your email address will not be published. Required fields are marked *