ಮಲಗಿದ್ದ ಮಗುವನ್ನೇ ಹೊತ್ತೊಯ್ದು ತಿಂದ ಚಿರತೆ: ಕುಟುಂಬದವರ ಮುಗಿಲು ಮುಟ್ಟಿದ ಆಕ್ರಂದನ

ರಾಮನಗರ: ಮಲಗಿದ್ದ ಮಗುವನ್ನು ಹೊತ್ಯೋಯ್ದು ತಿಂದು ಸಾಯಿಸಿದ ಚಿರತೆ ಘಟನೆ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಕದಿರಯ್ಯನಪಾಳ್ಯ ಗ್ರಾಮದಲ್ಲಿ ನಡೆದಿದೆ.
ಸೆಕೆ, ಧಗೆಯೂ ಹೆಚ್ಚಾಗಿದ್ದರಿಂದ ಬಾಗಿಲನ್ನ ತೆಗೆದು ಮಲಗಿದ್ದಾಗ, ಮೂರು ವರ್ಷದ ಗಂಡು ಮಗುವನ್ನ ಚಿರತೆ ಹೊತ್ಯೋಯ್ದದಿದೆ. ಈ ವೇಳೆ ಬಂದ ಚಿರತೆ ಮಲಗಿದ್ದ ಮಗುವನ್ನ ತೆಗೆದುಕೊಂಡು ಹೋಗಿದೆ.
ಗ್ರಾಮದ ನಿವಾಸಿ ಕಾಮಯ್ಯರ ಚಿಕ್ಕಣ್ಣನ ಮೊಮ್ಮಗನಾಗಿರುವ ಬಾಲಕ, ಚಂದ್ರಪ್ಪ ಹಾಗೂ ಮಂಗಳಗೌರಮ್ಮ ಪುತ್ರ ಹೇಮಂತ್ ಸಾವನ್ನಪ್ಪಿರುವ ಬಾಲಕ. ತಾಯಿ ಮಂಗಳಗೌರಮ್ಮ ತವರುಮನೆ ಕದರಯ್ಯನಪಾಳ್ಯ. ವಾರದ ಹಿಂದಷ್ಟೇ ಆಗಮಿಸಿದ್ದ ಕುಟುಂಬ. ಮನೆಯೊಳಗೆ ನುಗ್ಗಿದ ಚಿರತೆ ಮಗುವನ್ನು ಹೊತ್ತೊಯ್ದಿದೆ. ಕತ್ತಲೆಯಲ್ಲಿ ಹುಡುಕಾಡಿದಾಗ ಮನೆಯಿಂದ ಸುಮಾರು ಅರುವತ್ತು ಮೀಟರ್ ದೂರದ ಪೊದೆಯಲ್ಲಿ ಮಗುವಿನ ಶವ ಪತ್ತೆಯಾಗಿದೆ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ, ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಕರಣ ಮಾಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.