ಧಾರವಾಡ ಪ್ರಕರಣ ಮರೆಯುವ ಮುನ್ನ “ಕೂಸ್”ನ್ನ ಬಿಟ್ಟು ಹೋದ ಮತ್ತೊಬ್ಬ ಜನ್ಮದಾತೆ….

ಹೆಣ್ಣಾಗಿ ಹುಟ್ಟಿದ್ದೆ ತಪ್ಪಾಯ್ತಾ
ಕಣ್ಣೀರಾಗುತ್ತಿದ್ದ ಕೂಸನ್ನ ರಕ್ಷಿಸಿದ ಪುಣ್ಯವಂತರು..
ಬಾಗಲಕೋಟೆ: ನವಜಾತ ಶಿಶುವನ್ನ (ಹೆಣ್ಣು ಶಿಶು)ಕಬ್ಬಿನ ಗದ್ದೆಯಲ್ಲಿ ಬೀಸಾಕಿಹೋದ ಘಟನೆ ಜಮಖಂಡಿ ತಾಲೂಕಿನ ಶೂರಪಾಲಿ ಗ್ರಾಮದ ಬಳಿಯ ರಸ್ತೆ ಪಕ್ಕದ ಕಬ್ಬಿನ ಗದ್ದೆಯಲ್ಲಿ ಪತ್ತೆಯಾಗಿದೆ.
ಶಿಶು ಅಳುವುದನ್ನ ಕೇಳಿ ಸ್ಥಳಕ್ಕೆ ಗ್ರಾಮಸ್ಥರು ದೌಡಾಯಿಸಿ, ಶಿಶುವನ್ನ ತಕ್ಷಣವೇ ಜಮಖಂಡಿ ನಗರದ ತಾಲೂಕಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ವೀಡಿಯೋ ಇಲ್ಲಿದೆ ನೋಡಿ…
https://youtu.be/e21jcYtzvP4
ಜಮಖಂಡಿ ತಾಲೂಕಾ ಆಸ್ಪತ್ರೆಯಿಂದ ಬಾಗಲಕೋಟೆ ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಾಂತ್ವನ ಕೇಂದ್ರಕ್ಕೆ ಶಿಶು ರವಾನೆ ಮಾಡಲಾಗಿದ್ದು, ಶಿಶು ಹೆತ್ತು ಬೀಸಾಕಿ ಹೋದ ಪಾಪಿಗಳ ವಿರುದ್ಧ ಗ್ರಾಮಸ್ಥರ ಹಿಡಿಶಾಪ ಹಾಕಿದ್ದಾರೆ.