“ಪುಣ್ಯಕೋಟಿ ಗೋವು”ಗೆ ಬೈರಿದೇವರಕೊಪ್ಪದ ಬಳಿ ‘ಚಿಗರಿ’ ಡಿಕ್ಕಿ- ರಸ್ತೆಗಿಳಿದ ರೈತ…

ಹುಬ್ಬಳ್ಳಿ: ವೇಗವಾಗಿ ಬಂದ ಬಿಆರ್ಟಿಎಸ್ನ ಚಿಗರಿ ಬಸ್ಸೊಂದು ಆಕಳಿಗೆ ಡಿಕ್ಕಿ ಹೊಡೆದ ಘಟನೆ ನಡೆದಿದ್ದು, ಗೋವು ತೀವ್ರ ರಕ್ತಸ್ರಾವದಿಂದ ನರಳುವಂತಾಗಿದೆ.
ಅಪಘಾತ ನಡೆದ ಸಮಯದಲ್ಲಿದ್ದ ರೈತ ಆಕ್ರೋಶಗೊಂಡು ಬಿಆರ್ಟಿಎಸ್ ಮಾರ್ಗದಲ್ಲಿ ಗೋವನ್ನ ಹಿಡಿದುಕೊಂಡು ಆಕ್ರೋಶವ್ಯಕ್ತಪಡಿಸುತ್ತಿದ್ದಾರೆ.
ರೈತನ ಹೋರಾಟಕ್ಕೆ ಬೈರಿದೇವರಕೊಪ್ಪದ ಹಲವರು ಸಾಥ್ ನೀಡಿದ್ದು, ಅಪಘಾತ ಮಾಡಿದ ಬಸ್ ಚಾಲಕನ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.