Posts Slider

Karnataka Voice

Latest Kannada News

ಬೆಂಗಳೂರಿಂದ ಹುಬ್ಬಳ್ಳಿಗೆ ತಂದು “ಆಕೆಗೆ” ವಂಚಿಸಿದ Instagram ಚೀಟರ್…

Spread the love

ಹುಬ್ಬಳ್ಳಿ: ಪತಿಯ ಜೊತೆ ಇದ್ದವಳನ್ನ ಯಾಮಾರಿಸಿ ವಾಣಿಜ್ಯನಗರದಲ್ಲಿ ಕೆಲಸ ಕೊಡಿಸುವುದಾಗಿ ಮಹಿಳೆಯನ್ನ ಕರೆತಂದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿಕೊಂಡು ಹೋಗಿದ್ದ ಆರೋಪಿಯನ್ನ ಬಂಧನ ಮಾಡುವಲ್ಲಿ ಶಹರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ದೋಚಿಕೊಂಡು ಹೋಗಿದ್ದ ವಸ್ತುಗಳು

ಅರವಿಂದ ಎಂಬಾತನೇ ನಂಬಿದ ಮಹಿಳೆಗೆ ವಂಚನೆ ಮಾಡಿದ ಕಿರಾತಕನಾಗಿದ್ದು, ಜೈಲೂಟಕ್ಕೆ ಪೊಲೀಸರು ಕಳಿಸಿದ್ದಾರೆ. ಇದೀಗ ಓರ್ವ ಮಹಿಳೆಯ ದೂರಿನ ಮೇರೆಗೆ ಬಂಧನವಾಗಿದ್ದು, ಈತ ಹಲವು ಮಹಿಳೆಯರಿಗೆ ವಂಚನೆ ಮಾಡಿದ್ದಾನೆಂದು ಗೊತ್ತಾಗಿದೆ.

ಇನ್ಸಪೆಕ್ಟರ್ ಆನಂದ ಒಣಕುದರಿ ನೇತೃತ್ವದಲ್ಲಿ ಆರೋಪಿಯನ್ನ ಬಂಧಿಸಲಾಗಿದೆ.


Spread the love

Leave a Reply

Your email address will not be published. Required fields are marked *