ಇನ್ನೂ 23 ಜನಪ್ರತಿನಿಧಿಗಳ ಸಿಡಿಗಳಿವೆಯಂತೆ….!

ಬೆಂಗಳೂರು: ಇನ್ನೂ 23 ಜನಪ್ರತಿನಿಧಿಗಳ ಸಿಡಿ ಇದೆ. ಅದನ್ನೂ ಬಿಡುಗಡೆ ಮಾಡುತ್ತಾರೆ ಎಂಬ ಗಾಸಿಪ್ ಇದೆ. ಸಿಡಿ ಹೇಳಿಕೆಗಳನ್ನು ನೀಡಿ ಜನಪ್ರತಿನಿಧಿಗಳನ್ನು ಬ್ಲಾಕ್ ಮೇಲ್ ಮಾಡಲಾಗುತ್ತಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಶಾಸಕ ಯತ್ನಾಳ, ನನ್ನ ಹೇಳಿಕೆಗೂ ರಮೇಶ್ ಜಾರಕಿಹೊಳಿ ಸಿಡಿ ಬಿಡುಗಡೆ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ನಾನು ಸಿಡಿ ಮಾಡಿದವನೂ ಅಲ್ಲ, ಆ ಸಿಡಿ ನಾನು ನೋಡಿಯೂ ಇಲ್ಲ ಎಂದರು.
ಈ ರೀತಿ ಬ್ಲಾಕ್ ಮೇಲ್ ತಂತ್ರ ಸರಿಯಲ್ಲ. ಇನ್ನೂ 23 ಜನರ ಸಿಡಿ ಇದೆ ಅದನ್ನು ವಾರದಲ್ಲಿ ಬಿಡುಗಡೆ ಮಾಡುತ್ತೇವೆ ಎಂಬ ಬೆದರಿಕೆಗಳನ್ನು ಕೂಡ ಹಾಕಲಾಗುತ್ತಿದೆ. ಎಲ್ಲಾ ಪಕ್ಷದಲ್ಲಿರುವ ಕೆಲ ನಾಯಕರು ಈ ರೀತಿ ಮಾಡಿಸುತ್ತಿದ್ದಾರೆ. ಕಾಂಗ್ರೆಸ್-ಬಿಜೆಪಿ ಎರಡೂ ಕಡೆಯ ಕೆಲ ನಾಯಕರು ಈ ರೀತಿ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಮೊದಲು ಈ ಬಗ್ಗೆ ತನಿಖೆಯಾಗಬೇಕು ಎಂದು ಹೇಳಿದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳರ ಈ ಹೇಳಿಕೆಯಿಂದ ಸಿಡಿಗಳ ಹಾವಳಿ ಮತ್ತೆ ಮುಂದುವರೆಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.