Posts Slider

Karnataka Voice

Latest Kannada News

ಹು-ಧಾ ಮಹಾನಗರ ಪಾಲಿಕೆ ಮಾಜಿ ಸದಸ್ಯನಿಗೂ ಇದೇಯಾ ಸಿಡಿ ಲೇಡಿ ನಂಟು….!?

1 min read
Spread the love

ಬೆಂಗಳೂರು: ಮಾಜಿ ಸಚಿವ ರಮೇಶ ಜಾರಕಿಹೊಳಿಯವರು ರಾಜೀನಾಮೆ ನೀಡುವುದಕ್ಕೆ ಕಾರಣವಾದ ಸಿಡಿ ಪ್ರಕರಣಕ್ಕೂ ಹುಬ್ಬಳ್ಳಿ-ಧಾರವಾಡದಲ್ಲಿನ ಮಹಾನಗರ ಪಾಲಿಕೆಯ ಮಾಜಿ ಸದಸ್ಯರೊರ್ವರಿಗೂ ನಂಟಿದೇಯಾ ಎಂಬ ಪ್ರಶ್ನೆ ಕೇಳಿ ಬರಲಾರಂಭಿಸಿದೆ.

ರಮೇಶ ಜಾರಕಿಹೊಳಿಯವರ ಆಪ್ತ ವಲಯದಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಹಾನಗರ ಪಾಲಿಕೆಯ ಮಾಜಿ ಸದಸ್ಯರು, ಸಿಡಿ ಪ್ರಕರಣ ಬಯಲಿಗೆ ಬಂದ ನಂತರ ಕಾಣಿಸಿಕೊಳ್ಳುವುದು ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ.

ಮಹಾನಗರ ಪಾಲಿಕೆಯ ಮಾಜಿ ಸದಸ್ಯರ ಜೊತೆಗೆ ಸಿಡಿ ಲೇಡಿ ಈ ಹಿಂದೆ ಕಾಣಿಸಿಕೊಂಡು, ಅವರ ಅಪಾರ್ಟಮೆಂಟಿನತ್ತ ಮನೆಗೂ ಬಂದು ಹೋಗಿದ್ದರೆಂದು ವದಂತಿ ಹಬ್ಬಿದೆ.

ಸಿಡಿ ಪ್ರಕರಣ ಹೊರಗೆ ಬಿದ್ದ ದಿನವೇ ಧಾರವಾಡದ ಉಪನಗರ ಠಾಣೆ ಪೊಲೀಸರ ತಂಡವೊಂದು ಪ್ರಮುಖ ಸ್ಥಳಗಳಲ್ಲಿ ತಡರಾತ್ರಿಯವರೆಗೂ ಹುಡುಕಾಟ ನಡೆಸಿದ್ದನ್ನ ಇಲ್ಲಿ ಸ್ಮರಿಸಬಹುದಾಗಿದೆ.


Spread the love

Leave a Reply

Your email address will not be published. Required fields are marked *