ರೌಡಿ ಷೀಟರ್ ಹತ್ಯೆ: ಅಸಲಿಯತ್ತಿನ ಎಕ್ಸಕ್ಲೂಸಿವ್ ಸಿಸಿಟಿವಿ ವೀಡಿಯೋ ಕರ್ನಾಟಕವಾಯ್ಸ್.ಕಾಂಗೆ ಲಭ್ಯ….
1 min readಹುಬ್ಬಳ್ಳಿ: ರೌಡಿ ಷೀಟರ್ ನನ್ನ ಅರವಿಂದನಗರದಲ್ಲಿ ಕೊಚ್ಚಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆ ದಿನ ರಾತ್ರಿ ನಡೆದಿದ್ದಾರೂ ಏನು. ಪ್ರಕರಣದಲ್ಲಿರುವ ಬಹುಮುಖ್ಯ ಅಂಶಗಳೇನು ಎಂಬುದರ ಪ್ರಮುಖವಾದ ಸಿಸಿಟಿವಿ ವೀಡಿಯೋಗಳು ಕರ್ನಾಟಕವಾಯ್ಸ್.ಕಾಂಗೆ ಲಭಿಸಿವೆ.
ರೌಡಿ ಷೀಟರ್ ಅಕ್ಬರ ಅಲ್ಲಾಭಕ್ಷ ಮುಲ್ಲಾ ಮೂಲತಃ ನವಲಗುಂದ ತಾಲೂಕಿನ ಮೊರಬದವನು. ಹಲವು ವರ್ಷಗಳ ಹಿಂದೆ ಆತ ಹೊಸೂರಿನಲ್ಲಿದ್ದ. ತದನಂತರ ಲವ್ ಮ್ಯಾರೇಜ್ ಆಗಿ ತೊರವಿಹಕ್ಕಲ ಪ್ರದೇಶದಲ್ಲಿದ್ದ.
ಆತನನ್ನ ಹತ್ಯೆಯಾಗುವ ರಾತ್ರಿ ಉದ್ದೇಶಪೂರ್ವಕವಾಗಿ ಕರೆಸಿಕೊಳ್ಳಲಾಗಿದೇಯಾ. ಆ ಸಮಯದಲ್ಲಿ ಆತನ ಜೊತೆಗಿದ್ದವರು ಯಾರೂ, ಈ ಎಲ್ಲ ಮಾಹಿತಿಯನ್ನ ಸಿಸಿಟಿವಿ ದೃಶ್ಯಗಳು ನೀಡುತ್ತಿವೆ. ಆ ಎಕ್ಸಕ್ಲೂಸಿವ್ ದೃಶ್ಯಗಳು ಇಲ್ಲಿವೆ ನೋಡಿ..
ರೌಡಿ ಷೀಟರ್ ನ ಕೊಲೆಯಾದ ಮೇಲೆ ಒಬ್ಬೇ ಒಬ್ಬ ಹೋಗಿ ಪೊಲೀಸರಿಗೆ ಶರಣಾಗತಿ ಆಗಿದ್ದಾನೆ. ಹಾಗಾದ್ರೆ, ಎಲ್ಲವೂ ಪ್ಲಾನ್ ರೂಪಿತವಾಗಿತ್ತಾ. ಈ ಅಸಲಿ ಪ್ಲಾನಿನ ರೂವಾರಿಗಳು ಯಾರೂ..? ಯಾರನ್ನೋ ಹತ್ಯೆ ಮಾಡಿಸಿ, ಮತ್ತೊಬ್ಬನ ಶಕ್ತಿಯನ್ನ ಕುಂದಿಸುವ ಪ್ರಯತ್ನ ನಡೆಯುತ್ತಿದೇಯಾ…? ಸದ್ದಿಲ್ಲದೇ ವಾಣಿಜ್ಯನಗರಿಯಲ್ಲಿ ಗ್ರೂಫ್ ರೌಡಿಸಂ ನಡುವೆ ಶೀತಲ ಸಮರ ಆರಂಭವಾಗಿದೇಯಾ..? ಈ ಎಲ್ಲ ಪ್ರಶ್ನೆಗಳಿಗೆ ಪೊಲೀಸರು ಉತ್ತರ ಹುಡುಕಬೇಕಿದೆ.