Posts Slider

Karnataka Voice

Latest Kannada News

ಯೂನಿಯನ್ ಬ್ಯಾಂಕ್ ಎಟಿಎಂಗೆ ಕನ್ನ: ಸಿಸಿಟಿವಿ ವೈರ್ ಕತ್ತರಿಸಿದ ಕಿಲಾಡಿಗಳು..!

1 min read
Spread the love

ವಿಜಯಪುರ: ತಾಂತ್ರಿಕವಾಗಿ ಪರಿಣಿತರಿರುವ ಕಳ್ಳರು, ಮೊದಲು ಸಿಸಿಟಿವಿ ವೈರನ್ನ ಕತ್ತರಿಸಿ ಯೂನಿಯನ್ ಬ್ಯಾಂಕ್ ಎಟಿಎಂ ಕಳ್ಳತನ ಮಾಡಲು ವಿಫಲ ಯತ್ನ ನಡೆಸಿದ ಘಟನೆ ಮುದ್ದೇಬಿಹಾಳ ಪಟ್ಟಣದ ತಂಗಡಿಗಿ ರಸ್ತೆಯಲ್ಲಿರುವ ಯೂನಿಯನ್ ಬ್ಯಾಂಕ್ ಎಟಿಎಂನಲ್ಲಿ ನಡೆದಿದೆ.

ಕಳೆದ ರಾತ್ರಿ ಯೂನಿಯನ್ ಎಟಿಎಂನ ಸಿಸಿಟಿವಿ ವೈರ್ ಕತ್ತರಿಸಿ ಕಳ್ಳತನಕ್ಕೆ ಯತ್ನ ನಡೆಸಿದ್ದು, ಎಟಿಎಂ ಬೀಗ ತೆರೆದು ಕಳ್ಳರು ಮರಳಿ ಹೋಗಿದ್ದಾರೆ. ಬೆಳಗಿನ ಜಾವ ಪ್ರಕರಣದ ಬಗ್ಗೆ ಮಾಹಿತಿ ದೊರೆತ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿದ ಮುದ್ದೇಬಿಹಾಳ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ನಿನ್ನೆಯಷ್ಟೇ ಸಿಂದಗಿ ಪಟ್ಟಣದಲ್ಲಿ ಸೆಕ್ಯುರಿಟಿ ಗಾರ್ಡನ್ನ ಕೊಲೆ ಮಾಡಿ ಎಟಿಎಂ ಕಳ್ಳತನ ಮಾಡಲು ಪ್ರಯತ್ನಿಸಿದ್ದರು. ಐಸಿಐಸಿಐ ಬ್ಯಾಂಕ್ ಎಟಿಎಂ ನ ಸೆಕ್ಯೂರಿಟಿ ಗಾರ್ಡ್ ರಾಹುಲ ರಾಠೋಡ ಎಂಬಾತನನ್ನು ಮೂವರು ಮುಸುಕುಧಾರಿಗಳು ಕೊಲೆ ಮಾಡಿ ಎಟಿಎಂ ದರೋಡೆಗೆ ಯತ್ನಿಸಿದ್ರು.


Spread the love

Leave a Reply

Your email address will not be published. Required fields are marked *