Category: Breaking News

  • ವಿನೋದ ಅಸೂಟಿ ಅಭಿಮಾನಿಗಳಿಂದ ರಾಯಣ್ಣನಿಗಾಗಿ ಹೋರಾಟ:ಅಧಿಕಾರಿಗಳ ವಿರುದ್ಧ ಆಕ್ರೋಶ

    ನವಲಗುಂದ: ಬೆಳಗಾವಿ ಜಿಲ್ಲಾ ಪಿರಣವಾಡಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನ ಅಧಿಕಾರಿಗಳು ತೆರವುಗೊಳಿಸಿದ್ದನ್ನ ಖಂಡಿಸಿ ಧಾರವಾಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿನೋದ ಅಸೂಟಿ ಅಭಿಮಾನಿ ಬಳಗ ಪ್ರತಿಭಟನೆ ನಡೆಸಿತು.

    ನಗರದಲ್ಲಿರುವ ಸಂಗೋಳ್ಳಿ ರಾಯಣ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸೂಚಿಸಸಿದ ನಂತರ ತಹಶೀಲ್ದಾರ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು. ಅಧಿಕಾರಿಗಳು ಸ್ವಾತಂತ್ರ್ಯ ಹೋರಾಟಗಾರ ರಾಯಣ್ಣನ ಪ್ರತಿಮೆಯನ್ನ ತೆರವುಗೊಳಿಸಿದ್ದು, ರಾಷ್ಟ್ರದ್ರೋಹ ಮಾಡಿದಂತೆ. ಇಂತಹವರ ವಿರುದ್ಧ ಕ್ರಮ ಜರುಗಿಸುವ ಜೊತೆಗೆ ಪ್ರತಿಮೆಯನ್ನ ಮತ್ತೆ ಅಲ್ಲೇ ಪ್ರತಿಷ್ಠಾಪಿಸಬೇಕೆಂದು ಆಗ್ರಹಿಸಿದರು.

    ಪ್ರವೀಣ ಶಲವಡಿ, ಚನ್ನಪ್ಪಗೌಡ ಪಾಟೀಲ್,  ಹನಮಂತ ಚಿಕ್ಕಣ್ಣನವರ,   ಮಹಾದೇವ ಚುಂಚನೂರ,  ಶಿವಾನಂದ ಚಲವಾದಿ,  ಸುಲೆಮಾನ ನಾಶೀಪುಡಿ, ಪ್ರಕಾಶ್ ಸಾರಾವರಿ,  ರಾಮು ಮಾಡೊಳ್ಳಿ, ವಿಠ್ಠಲ್ ಮೆಗೆನ್ನವರ್,  ರಮೇಶ ಮಲದಾಸರ್,  ನಿಂಗಪ್ಪ ಕೆಲಗೇರಿ,  ವಿಕ್ರಂ ಕುರಿ, ರಿಯಾಜ್  ನಾಶಿಪುಡಿ, ವಿಠಲ್ ಜಮದಾರ್, ಉಮೇಶ ನವಲಗುಂದ ಸೇರಿದಂತೆ ವಿನೋದ ಅಸೂಟಿ ಅಭಿಮಾನಿಗಳು ಭಾಗವಹಿಸಿದ್ದರು

  • ತುಮರಿಕೊಪ್ಪ-ಹೆಬ್ಬಳ್ಳಿ-ಅಮ್ಮಿನಬಾವಿ ಸೇರಿದಂತೆ ಇಂದಿನ ಪಾಸಿಟಿವ್ ಬಂದಿದ್ದು ಎಲ್ಲೇಲ್ಲಿ ಗೊತ್ತಾ..?

    ಧಾರವಾಡ ಕೋವಿಡ್ 8131 ಪ್ರಕರಣಗಳು : 5370 ಜನ ಗುಣಮುಖ ಬಿಡುಗಡೆ

    ಧಾರವಾಡ: ಜಿಲ್ಲೆಯಲ್ಲಿ ಇಂದು  ಕೋವಿಡ್ 279 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 8131 ಕ್ಕೆ ಏರಿದೆ. ಇದುವರೆಗೆ 5370 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2512 ಪ್ರಕರಣಗಳು ಸಕ್ರಿಯವಾಗಿವೆ.  36 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 249 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

    ಇಂದು ಪ್ರಕರಣಗಳು ಪತ್ತೆಯಾದ ಸ್ಥಳಗಳು

    ಧಾರವಾಡ ತಾಲೂಕು

    ಬೇಲೂರ ಗ್ರಾಮ, ಮೆಹಬೂಬ ನಗರ,  ಹೆಬ್ಬಳ್ಳಿ ಅಗಸಿ ಓಣಿ, ವಿದ್ಯಾಗಿರಿ, ಇಟಿಗಟ್ಟಿ ಗ್ರಾಮ, ಚಿಕ್ಕಮಲ್ಲಿಗವಾಡ ಬಸ್ ಸ್ಟ್ಯಾಂಡ್ ಹತ್ತಿರ, ಸಪ್ತಾಪುರ, ಮಾಳಮಡ್ಡಿ ಕಲ್ಲಾಪುರ ಕಂಪೌಂಡ್,ಮಹಿಷಿ ರಸ್ತೆ, ಶಿವಗಿರಿ, ಸವದತ್ತಿ ರಸ್ತೆಯ ಶಿವಗಂಗಾ ನಗರ, ಸೈದಾಪುರ ಕಲ್ಮೇಶ್ವರ ಗುಡಿ ಹತ್ತಿರ, ತಡಕೋಡ ತಿಮ್ಮಾಪುರ ಓಣಿ, ಪೊಲೀಸ್ ಕ್ವಾಟರ್ಸ್,   ಸತ್ತೂರಿನ ಎಸ್‍ಡಿಎಮ್ ಆಸ್ಪತ್ರೆ, ಬಸವೇಶ್ವರ ನಗರ,  ಶ್ರೀಪಾದ ನಗರ, ಗರಗ ಗ್ರಾಮ, ಮದಿಹಾಳ ಎಸ್‍ಬಿಐ ಕಾಲೋನಿ, ಜಯನಗರ, ಸಂಗೊಳ್ಳಿ ರಾಯಣ್ಣ ನಗರ,  ನೆಹರು ನಗರ, ಕುರುಬಗಟ್ಟಿ ನಡಕಿನ ಓಣಿ, ಗಾಂಧಿ ನಗರ, ಯಾದವಾಡ ಗ್ರಾಮ, ಮಾಳಾಪುರ  ಶರೇವಾಡ ಓಣಿ, ಹೈಕೋರ್ಟ ಕ್ವಾಟರ್ಸ್, ರಾಯಾಪುರ, ಸೋಮಾಪುರ, ಕಮಲಾಪುರ, ಮರಾಠ ಕಾಲೋನಿ, ಸತ್ತೂರ ವನಸಿರಿ ನಗರ,ಕೆಸಿಸಿ ಬ್ಯಾಂಕ್ ರಸ್ತೆ, ,ಬನಶಂಕರಿ ನಗರ, ಕೆಲಗೇರಿ ಹತ್ತಿರ, ಹೆಬ್ಬಳ್ಳಿಯ ರವಿವಾರಪೇಟೆ, ದೇಶಪಾಂಡೆ ಗಲ್ಲಿ, ಮದಾರಮಡ್ಡಿ ಆದರ್ಶ ನಗರ, ರೇಣುಕಾ ನಗರ, ಕಣವಿಹೊನ್ನಾಪುರ, ಅಮ್ಮಿನಭಾವಿ, ನರೇಂದ್ರ ಗ್ರಾಮ, ಜನ್ನತ್ ನಗರ,ನವಲೂರ, ಶಿವಳ್ಳಿ ಗ್ರಾಮ, ಶಿರಡಿ ನಗರ, ಗುಲಗಂಜಿಕೊಪ್ಪ, ಕೋಟೂರ, ಹತ್ತಿಕೊಳ್ಳದ ದಾನು ನಗರ, ಸಾರಸ್ವತಪುರ, ಗಾಂಧಿ ಚೌಕ್, ಮನಗುಂಡಿ.

    ಹುಬ್ಬಳ್ಳಿ ತಾಲೂಕು

    ಕುಸುಗಲ್ ರಸ್ತೆಯ ಮಧುರಾ ಕಾಲೋನಿ, ನವೀನ್ ಪಾರ್ಕ್,ಸಾತ್ವಿಕ್ ಪಾರ್ಕ್, ಸಂತೋಷ ನಗರ, ಕುಸುಗಲ್ ಗ್ರಾಮ, ಕುಲಕರ್ಣಿ ಓಣಿ, ಗೋಕುಲ ರಸ್ತೆಯ ಅಕ್ಷಯ ಪಾರ್ಕ್,  ವೆಂಕಟೇಶ್ವರ ನಗರ, ರವಿ ನಗರ,  ಶಕ್ತಿ ನಗರ,ಸಂಗಮೇಶ್ವರ ಗುಡಿ ಓಣಿ,ಜವಳಿ ಗಾಡರ್ನ್, ರೈಲ್ವೆ ನಿಲ್ದಾಣ ಹತ್ತಿರ ಜನತಾ ಪ್ಲಾಟ್, ಬಾನಿ ಓಣಿ, ಯಲ್ಲಾಪುರ ಓಣಿ, ಕೇಶ್ವಾಪುರದ ಲಕ್ಷ್ಮಿ ಪಾರ್ಕ, ಕಾಡಸಿದ್ದೇಶ್ವರ ಕಾಲೋನಿ, ಗೋಪನಕೊಪ್ಪ ಗೊಲ್ಡನ್ ಕಾಲೋನಿ, ಗಾಯಿತ್ರಿ ಓಣಿ,   ಉಣಕಲ್, ರೈಲ್ವೆ ಆಸ್ಪತ್ರೆ, ಅಕ್ಷಯ ಕಾಲೋನಿ, ಬೆಂಗೇರಿ, ವಿನಾಯಕ ಕಾಲೋನಿ, ಆರ್.ಬಿ. ಪಾಟೀಲ ಆಸ್ಪತ್ರೆ,  ಬಾಳಗಿ ಲೇಔಟ್, ವಿದ್ಯಾನಗರ, ಗಿರಿಯಾಲ  ಬಸವನಗುಡಿ ಹತ್ತಿರ, ರೈಲ್ ನಗರ, ಸಿದ್ದೇಶ್ವರ ನಗರ, ರೈಲ್ವೆ ಕೋಚ್ ಪ್ಲಾಟ್ ಫಾರಂ, ರೈಲ್ವೆ ಸುರಕ್ಷಾ ದಳ,  ನವನಗರದ ಶಾಂತಾ ನಗರ,  ಬೆಂಡಿಗೇರಿ ಪೊಲೀಸ್ ಠಾಣೆ, ಗಣೇಶ ಪೇಟ, ಹೆಗ್ಗೇರಿ , ಭೈರಿದೇವರಕೊಪ್ಪ ಚೇತನಾ ಕಾಲೋನಿ, ನಾಗಾರ್ಜುನ ಎನಕ್ಲೇವ್ಸ್ ಎದುರು ಜೈನ್ ದೇವಾಲಯ ಹತ್ತಿರ, ಈಶ್ವರ ನಗರ ಗಣೇಶ ಕಾಲೋನಿ, ಲಿಂಗರಾಜ ನಗರ, ನೂಲ್ವಿ ಹೊಸ ಓಣಿ, ಉಣಕಲ್ ಆರ್ ಎನ್ ಎಸ್ ಮೋಟರ್ಸ್, ಗಿರಣಿಚಾಳ, ಶಿರಡಿ ನಗರ, ಸೆಂಟ್ರಲ್ ಲೇಔಟ್, ಹನುಮಂತ ನಗರ, ತತ್ವದರ್ಶ ಆಸ್ಪತ್ರೆ, ಮಹಾಲಿಂಗೇಶ್ವರ ನಗರ, ಶರೇವಾಡದ ಕುರಬರ ಓಣಿ, ನೇಕಾರ ನಗರ,ಬ್ಯಾಂಕರ್ಸ್ ಕಾಲೋನಿ,ಕಾನ್ಯಾ ನಗರ, ಮೊರಾರ್ಜಿ ನಗರ, ಸಾಯಿ ನಗರದ ಚೆನ್ನಮ್ಮಾ ಕಾಲೋನಿ,ಕುಮಾರವ್ಯಾಸ ನಗರ,ಸೆಟ್ಲಮೆಂಟ್ ಗಂಗಾಧರ ನಗರ,ವಿನೋಬಾ ನಗರ, ಚೇತನ ಕಾಲೋನಿ,ಬೆಂಗೇರಿ ಕಾಲೋನಿ,ಅಗಡಿ,ಕಾರವಾರ ರಸ್ತೆಯ ಪೊಲೀಸ್ ಕ್ವಾಟರ್ಸ್,ಆನಂದ ನಗರ,ಗೋಕುಲ ರಸ್ತೆಯ ಜೆಪಿ ನಗರ ಹತ್ತಿರ,ಶಾಂತಿ ಕಾಲೋನಿ,ಕಿಮ್ಸ್ ಆಸ್ಪತ್ರೆ ಕ್ವಾಟರ್ಸ್,ಮಂಟೂರ, ಸದರ ಸೋಫಾ,ಹೊಸಗಬ್ಬೂರ,ಬೆಂಗೇರಿಯ ವೆಂಕಟೇಶ್ವರ ಕಾಲೋನಿ, ಜೆಕೆ ಸ್ಕೂಲ್ ಹತ್ತಿರ, ಅರಳಿಕಟ್ಟಿಯ ಹಂಬಿ ಓಣಿ,ನಂದಿನಿ ನಗರ.ಇಂಗಳಹಳ್ಳಿ ಹಳೇ ಪ್ಲಾಟ್

    ಕಲಘಟಗಿತಾಲೂಕಿನ

    ಮಿಶ್ರಿಕೋಟಿ, ರಾಮನಾಳ,ಶೀಗಿಗಟ್ಟಿ ತಾಂಡ, ತುಮರಿಕೊಪ್ಪ, ಬಗಡಗೇರಿ, ಡೊಂಬರಿಕೊಪ್ಪ,

    ಕುಂದಗೋಳ ತಾಲೂಕಿನ

    ರೇವಣಸಿದ್ದೇಶ್ವರ ಪಾರ್ಕ, ಕಳ್ಳಿಯವರ ಪ್ಲಾಟ್, ಬೆಂಡಿಗೇರಿ ಓಣಿ ,ಬರದ್ವಾಡ,ಗೌಡರ ಓಣಿ, ಕೊಡ್ಲಿವಾಡ ಗ್ರಾಮ,  ಹೀರೆಹರಕುಣಿ ತಳಗೇರಿ ಓಣಿ, ,ಹೊಸಳ್ಳಿ ಜನತಾ ಪ್ಲಾಟ್,ಮಲಾಲಿ ಅಂಬಾ ಓಣಿ, ಸಂಶಿ ಗೋಕಾವಿ ಓಣಿ,ನೇತಾಜಿ ಸರ್ಕಲ್, ಯರೆಬೂದಿಹಾಳ ಯಲಗೇರಿ ಓಣಿ, ಕಾಳಿದಾಸ ನಗರ,

    ನವಲಗುಂದ ತಾಲೂಕಿನ

    ಅಂಬೇಡ್ಕರ್ ಓಣಿ, ನವಲಗುಂದ ಡಿಪೋ, ನವಲಗುಂದ ಓಣಿ, ಹಳ್ಳದ ಓಣಿ, ಹೊರಕೇರಿ ಓಣಿ, ಇಬ್ರಾಹಿಂಪುರ, ಬೆಳವಟಗಿ, ದಾಟನಾಳದ ತಳವಾರ ಓಣಿ, ಕೊಂಗವಾಡ ಗಾಂಧಿ ಚೌಕ್, ಶಲವಡಿಯ ನೀರಾವರಿ ಕಾಲೋನಿ ಓಣಿ, ಯಮನೂರು,ಅರೇಹಟ್ಟಿ,ಗೊಬ್ಬರಗುಂಪಿ,

    ಅಣ್ಣಿಗೇರಿ

    ಸಮಗಾರ ಓಣಿ, ಕುರಹಟ್ಟಿ ಭೂಸನೂರ ಮಠ, ಗಣೇಶ ನಗರ, ಸಣ್ಣಕೇರಿ ಓಣಿ, ಮೇಟಿ ಪ್ಲಾಟ್, ಅಂಬಿಕಾ ನಗರ, ಎಪಿಎಂಸಿ ಹತ್ತಿರ, ಉದಯ ನಗರ, ಹೊಸಪೇಟೆ ಓಣಿ,ಕೇರಿ ಓಣಿ,ಹೊರಕೇರಿ ಓಣಿ,ಅಮೃತ ನಗರ,ಮುಂಡರಗಿ ಓಣಿ,ರಾಜರಾಜೇಶ್ವರಿ ನಗರ,ಮುರದಖಾನ್ ಓಣಿ, ಬಂಗಾರಪ್ಪ ನಗರ

    ಬೆಳಗಾವಿ ಜಿಲ್ಲೆಯ : ಕಿತ್ತೂರ ತಾಲೂಕಿನ ಬೈಲೂರು ಗ್ರಾಮ,

    ಹಾವೇರಿ ಜಿಲ್ಲೆಯ: ಶಿಗ್ಗಾಂವ್ ತಾಲೂಕಿನ ಬನ್ನೂರು,ಸವಣೂರ ಉಪ್ಪಾರ ಓಣಿ, ಕರ್ಜಗಿ ಗ್ರಾಮ, ರಾಣೇಬೆನ್ನೂರು ತಾಲೂಕಿನ ಸುಣಗಾರ ಓಣಿ,

    ಬಾಗಕೋಟಿ ಜಿಲ್ಲೆಯ : ಮಹಾಲಿಂಗಪುರ,

    ಕೊಪ್ಪಳ ಜಿಲ್ಲೆಯ: ಹುಡ್ಕೋ ಕಾಲೋನಿ,

    ಗದಗ ಜಿಲ್ಲೆಯ: ಬೆಟಗೇರಿ,ಲಕ್ಷ್ಮೇಶ್ವರ.

  • ಧಾರವಾಡ ಜಿಲ್ಲೆಯಲ್ಲಿ ಗುಣಮುಖರಾದವರ ಸಂಖ್ಯೆ ಹೆಚ್ಚು: 279 ಪಾಸಿಟಿವ್- 351 ಗುಣಮುಖ: 10 ಸೋಂಕಿತರ ಸಾವು

    ಧಾರವಾಡ ಜಿಲ್ಲೆಯಲ್ಲಿ ಗುಣಮುಖರಾದವರ ಸಂಖ್ಯೆ ಹೆಚ್ಚು: 279 ಪಾಸಿಟಿವ್- 351 ಗುಣಮುಖ: 10 ಸೋಂಕಿತರ ಸಾವು

     ಜಿಲ್ಲೆಯಲ್ಲಿ ಇಂದು ಸೋಂಕಿತರಿಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚಾಗಿದೆ. 10 ಸೋಂಕಿತರು ಮೃತಪಟ್ಟಿದ್ದು, 279 ಜನರಿಗೆ ಪಾಸಿಟಿವ್ ಬಂದಿದೆ. ಆದರೆ, ಗುಣಮುಖರಾದವರ ಸಂಖ್ಯೆ 351. ಹೀಗಾಗಿ ಜಿಲ್ಲೆಯಲ್ಲಿ ಹೊಸ ಆಶಾಭಾವ ಮೂಡಿದೆ.

  • ರಾಜ್ಯದಲ್ಲಿಂದು 7665 ಪಾಸಿಟಿವ್- 8387 ಗುಣಮುಖ-139 ಸೋಂಕಿತರ ಸಾವು

    ರಾಜ್ಯದಲ್ಲಿಂದು 7665 ಪಾಸಿಟಿವ್- 8387 ಗುಣಮುಖ-139 ಸೋಂಕಿತರ ಸಾವು

    ರಾಜ್ಯದಲ್ಲಿ ಇಂದು ಕೂಡಾ ಕೊರೋನಾ ಪಾಸಿಟಿವ್ ಸಂಖ್ಯೆಗಳ ಹೆಚ್ಚಳ ಕಂಡು ಬಂದಿದ್ದು, ಬೆಂಗಳೂರಲ್ಲಿಯೇ ಅಧಿಕ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

    ಬೆಂಗಳೂರು ಒಂದರಲ್ಲೇ 2242 ಪ್ರಕರಣಗಳು ಪತ್ತೆಯಾಗಿವೆ.

  • ಕಿಟೆಲ್ ಕಡೆ ಬಂದು ರಿಪೇರಿ ಮಾಡಿದ್ರಂತೆ..! ನೀವೂ ಅರಾಮಾಗಿ ಹೋಗಬಹುದು..!

    ಧಾರವಾಡ: ಒಂದು ಗಂಟೆಯ ಹಿಂದಷ್ಟೇ ವಿದ್ಯುತ್ ಕಂಬದಲ್ಲಿ ಬೆಂಕಿಯುಂಡೆ ಬೀಳುತ್ತಿದೆ ಎಂದು ವೀಡಿಯೋ ಸಮೇತ ವಿವರಿಸಲಾಗಿತ್ತು. ಇದೀಗ ಹೆಸ್ಕಾಂನವರು ಬಂದು ದುರಸ್ತಿ ಮಾಡಿ ಹೋಗಿದ್ದಾರಂತೆ. ಪ್ರಯಾಣಿಕರು ಅರಾಮಾಗಿ ಈ ಭಾಗದಲ್ಲಿ ಸಂಚಾರ ಮಾಡಬಹುದು..

     

    ಕೆಲ ಸಮಯದ ಹಿಂದೆ ಪ್ರಕಟವಾದದ್ದು

     

    ಧಾರವಾಡ: ಕಿಟೆಲ್ ಕಾಲೇಜ ಬಳಿ ಬೆಂಕಿಯುಂಡೆ- ಹೌಹಾರಿದ ಸಂಚಾರಿಗಳು.. ನೀವೂ ಎಲ್ಲಿದ್ದೀರಿ.. ಹುಷಾರು..!

    ಧಾರವಾಡ: ನಿರಂತರವಾಗಿ ಮಳೆ ಸುರಿಯುತ್ತಿರುವ ಸಮಯದಲ್ಲೇ ವಿದ್ಯುತ್ ಶಾಕ್ ಸರ್ಕೀಟ್ ನಿಂದ ಬೆಂಕಿ ಕಿಡಿಗಳು ರಸ್ತೆಯುದ್ದಕ್ಕೂ ಬೀಳುತ್ತಿದ್ದು, ಸಾರ್ವಜನಿಕರು ಆತಂಕದಿಂದ ಸಂಚರಿಸುವ ಸ್ಥಿತಿ ಕಿಟೆಲ್ ಕಾಲೇಜು ಬಳಿ ನಡೆಯುತ್ತಿದೆ.

    ವಿದ್ಯುತ್ ಕಂಬದ ಬಳಿ ತಂತಿಗಳು ಕೂಡಿಕೊಂಡು ಬೆಂಕಿ ಕಿಡಿಗಳು ಬೀಳುತ್ತಿವೆ. ಅತೀಯಾಗಿ ಬೆಂಕಿ ಬೀಳುತ್ತಿರುವುದು ಇಲ್ಲಿಂದ ಸಂಚರಿಸುವವರು ಭಯದಿಂದ ಹೋಗುವ ಸ್ಥಿತಿ ನಿರ್ಮಾಣವಾಗಿದೆ.

    ಮಳೆಗಾಲದಲ್ಲಿ ಈ ಘಟನೆಯನ್ನ ಹೆಸ್ಕಾಂದವರು ನೋಡಬೇಕಿದೆ. ಇಲ್ಲದಿದ್ದರೇ ಸ್ಥಳೀಯರಿಗೆ ತೊಂದರೆಯಾಗುವುದು ನಿಶ್ಚಿತ. ಕಿಟೆಲ್ ಕಾಲೇಜಿನ ರಸ್ತೆಯಲ್ಲಿ ಈಗ ಇಂತಹ ಘಟನೆ ನಡೆಯುತ್ತಿದ್ದು,

    ಇದನ್ನ ತಕ್ಷಣವೇ ಸುಧಾರಿಸುವ ಪ್ರಯತ್ನವನ್ನ ಸಿಬ್ಬಂದಿಗಳು ಮಾಡಬೇಕಿದೆ.

  • ಧಾರವಾಡ: ಕಿಟೆಲ್ ಕಾಲೇಜ ಬಳಿ ಬೆಂಕಿಯುಂಡೆ- ಹೌಹಾರಿದ ಸಂಚಾರಿಗಳು.. ನೀವೂ ಎಲ್ಲಿದ್ದೀರಿ.. ಹುಷಾರು..!

    ಧಾರವಾಡ: ನಿರಂತರವಾಗಿ ಮಳೆ ಸುರಿಯುತ್ತಿರುವ ಸಮಯದಲ್ಲೇ ವಿದ್ಯುತ್ ಶಾಕ್ ಸರ್ಕೀಟ್ ನಿಂದ ಬೆಂಕಿ ಕಿಡಿಗಳು ರಸ್ತೆಯುದ್ದಕ್ಕೂ ಬೀಳುತ್ತಿದ್ದು, ಸಾರ್ವಜನಿಕರು ಆತಂಕದಿಂದ ಸಂಚರಿಸುವ ಸ್ಥಿತಿ ಕಿಟೆಲ್ ಕಾಲೇಜು ಬಳಿ ನಡೆಯುತ್ತಿದೆ.

    ವಿದ್ಯುತ್ ಕಂಬದ ಬಳಿ ತಂತಿಗಳು ಕೂಡಿಕೊಂಡು ಬೆಂಕಿ ಕಿಡಿಗಳು ಬೀಳುತ್ತಿವೆ. ಅತೀಯಾಗಿ ಬೆಂಕಿ ಬೀಳುತ್ತಿರುವುದು ಇಲ್ಲಿಂದ ಸಂಚರಿಸುವವರು ಭಯದಿಂದ ಹೋಗುವ ಸ್ಥಿತಿ ನಿರ್ಮಾಣವಾಗಿದೆ.

    ಮಳೆಗಾಲದಲ್ಲಿ ಈ ಘಟನೆಯನ್ನ ಹೆಸ್ಕಾಂದವರು ನೋಡಬೇಕಿದೆ. ಇಲ್ಲದಿದ್ದರೇ ಸ್ಥಳೀಯರಿಗೆ ತೊಂದರೆಯಾಗುವುದು ನಿಶ್ಚಿತ. ಕಿಟೆಲ್ ಕಾಲೇಜಿನ ರಸ್ತೆಯಲ್ಲಿ ಈಗ ಇಂತಹ ಘಟನೆ ನಡೆಯುತ್ತಿದ್ದು, ಇದನ್ನ ತಕ್ಷಣವೇ ಸುಧಾರಿಸುವ ಪ್ರಯತ್ನವನ್ನ ಸಿಬ್ಬಂದಿಗಳು ಮಾಡಬೇಕಿದೆ.

  • ಕೊರೋನಾ ಸೋಂಕಿತರ ಮನೆಗೆ ಶಿಕ್ಷಕರು: ಹೊಸ ಗಂಡಾಂತರಕ್ಕೆ ಮುನ್ನುಡಿ..? ಶಿಕ್ಷಕರ ಜೀವಕ್ಕೆ ಬೆಲೆಯಿಲ್ಲವೇ..?

    ಧಾರವಾಡ: ಕೊರೋನಾ ಸಮಯದಲ್ಲಿ ದಿನಕ್ಕೊಂದು ತೀರ್ಮಾನ ತೆಗೆದುಕೊಳ್ಳುವುದರಲ್ಲಿ ಸೈ ಎನಿಸಿಕೊಂಡಿರುವ ಶಿಕ್ಷಣ ಇಲಾಖೆಯೀಗ ಹೊಸದೊಂದು ತಂತ್ರ ಬಳಕೆ ಮಾಡಲು ಮುಂದಾಗಿದ್ದು, ಕೊರೋನಾ ಪಾಸಿಟಿವ್ ಬಂದವರ ಮನೆ ಮನೆಗೆ ಶಿಕ್ಷಕರನ್ನ ಕಳಿಸಲು ಮುಂದಾಗಿದೆ.

    ಮಕ್ಕಳಿಗೆ ಶಿಕ್ಷಣ ಕೊಡಲು ವಿದ್ಯಾಗಮ ಯೋಜನೆ ಆರಂಭಿಸಿ, ಇನ್ನೂ ಕೆಲವೇ ದಿನಗಳು ನಡೆದಿಲ್ಲ. ಅಷ್ಟರಲ್ಲಿ ಕೊರೋನಾ ಸೋಂಕಿತರೊಂದಿಗೆ ಸಂಪರ್ಕ ಹೊಂದಿದವರ ಮಾಹಿತಿ ಪಡೆಯಲು ಸೋಂಕಿತರ ಮನೆಗೆ ಶಿಕ್ಷಕರನ್ನ ಕಳಿಸಲು ಇಲಾಖೆ ಮುಂದಾಗಿದೆ.

    ಒಂದು ದಿನ ಸೋಂಕಿತರ ಮನೆಗೆ ಹೋಗಿ ಮರುದಿನ ಮಕ್ಕಳಿಗೆ ಅಭ್ಯಾಸ ಹೇಳಲು ವಿದ್ಯಾಗಮ ಯೋಜನೆಯಲ್ಲಿ ಭಾಗವಹಿಸಬೇಕಂತೆ. ಅಷ್ಟೇ ಅಲ್ಲ, ಇದಕ್ಕೆ ಸಂಬಂಧಿಸಿದಂತೆ ಯಾವುದೇ ಮುನ್ನಚ್ಚರಿಕೆ ವಸ್ತುಗಳನ್ನೂ ನೀಡೋದಿಲ್ಲ ಎಂದು ಇಲಾಖೆ ಸ್ಪಷ್ಟವಾಗಿ ಹೇಳಿದೆಯಂತೆ.

    ಶಿಕ್ಷಣ ಇಲಾಖೆಯ ತೀರ್ಮಾನಗಳು ಶಿಕ್ಷಕರ ವಿರುದ್ಧವಾಗಿಯೂ ಮಕ್ಕಳ ವಿರುದ್ಧವಾಗಿಯೂ ನಡೆಯುತ್ತಿವೆ ಎಂಬ ಭಾವನೆ ಹಲವರಲ್ಲಿ ಮೂಡುತ್ತಿದೆ. ಸೋಂಕಿತರ ಮನೆಗೆ ಹೋದಾಗ ಅವರಾಗಲೇ ಕ್ವಾರಂಟೈನ್ ದಲ್ಲಿ ಇರುತ್ತಾರೆ. ಅವರಿಂದ ಮಾಹಿತಿಯನ್ನ ಪಡೆಯುವುದು ಹೇಗೆ..? ಅವರ ಮನೆಗೆ ಸೀಲ್ ಡೌನ್ ಮಾಡಿರುತ್ತಾರೆ ಅಲ್ಲಿ ಹೋಗುವುದು ಹೇಗೆ..? ಹೋಗುವ ಶಿಕ್ಷಕರ ಆರೋಗ್ಯ ಕಾಪಾಡುವುದಕ್ಕೆ ಏನು ಕೊಡುತ್ತಿದ್ದೀರಿ..? ಇಂತಹ ಯಾವುದೇ ಪ್ರಶ್ನೆಗೆ ಉತ್ತರವಿಲ್ಲ.

    “ಕ್ವಾರಂಟೈನ್ ವಾಚ್” ಬಳಕೆ ಮಾಡಿ ಮಾಹಿತಿ ಕೊಡಬೇಕು. ನೀವು ದಿನಾನೂ ಎಷ್ಟು ಹೆಚ್ಚು ಮಾಹಿತಿಯನ್ನ ಕೊಡುತ್ತಿರೋ ಅಷ್ಟು ನಮ್ಮ ಜಿಲ್ಲೆ ಮುಂದೆ ಬರತ್ತೆ ಎಂದು ಹೇಳುತ್ತಿದ್ದಾರೋ ಹೊರತಾಗಿ, ಮೇಲಿನ ಪ್ರಶ್ನೆಗಳಿಗೆ ಉತ್ತರ ಮಾತ್ರ ಸಿಗುತ್ತಿಲ್ಲ.

    ಶಿಕ್ಷಣ ಇಲಾಖೆ ಕೊನೆಪಕ್ಷ ವಿದ್ಯಾಗಮ ಯೋಜನೆಯನ್ನಾದರೂ ಬಂದ್ ಮಾಡಿ ಇದನ್ನಾದರೂ ಮಾಡಿಸಬೇಕು. ಇಲ್ಲದಿದ್ದರೇ ಶಿಕ್ಷಕರಿಂದ ಮಕ್ಕಳಿಗೂ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಬಹುದೆಂಬ ಭಯ ಬಹುತೇಕರಲ್ಲಿ ಕಾಡುತ್ತಿದೆ. ಶಿಕ್ಷಣ ಸಚಿವರೇ ಇದಕ್ಕೇಲ್ಲ ಉತ್ತರ ನೀಡಬೇಕಷ್ಟೇ..!

  • ಧಾರವಾಡ ಅಪಘಾತ: ಅಪ್ಪ ಸಾವು-ಮಗ ಪಾರು: ಮೂವರಿಗೆ ಗಾಯ

    ಧಾರವಾಡ: ಎರಡು ಬೈಕ್ ಗಳ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಓರ್ವ ಮೃತಪಟ್ಟು ಮೂವರು ಗಾಯಗೊಂಡ ಘಟನೆ ನವಲಗುಂದ ತಾಲೂಕಿನ ಅಳಗವಾಡಿ ಬಳಿ ಸಂಭವಿಸಿದೆ.

    ಕಡಪಟ್ಟಿ ಹಳ್ಯಾಳದ ಬೈಕ್ ಅಳಗವಾಡಿಯ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಗ್ರಾಮದ ಬಸವರಾಜ ಪೂಜಾರ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಬಸವರಾಜರ ಪುತ್ರ ಹಾಗೂ ಕಡಪಟ್ಟಿ ಹಳ್ಯಾಳ ಗ್ರಾಮದ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

    ಘಟನಾ ಸ್ಥಳಕ್ಕೆ ನವಲಗುಂದ ಠಾಣೆಯ ಪೊಲೀಸರು ಭೇಟಿ ನೀಡಿ, ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

  • ಹಾಡಹಗಲೇ ಗ್ರಾಮ ಪಂಚಾಯತಿ ಸದಸ್ಯನ ಕೊಲೆ: ಬೈಕಲ್ಲಿ ಬಂದವರಿಂದ ಕೃತ್ಯ

    ರಾಯಚೂರು: ರಾಜಕೀಯವಾಗಿ ಸೋಲಿಸಲಾಗದ ಸ್ಥಿತಿಯಲ್ಲಿದ್ದವರು ಗ್ರಾಮ ಪಂಚಾಯತಿ ಚುನಾವಣೆ ಮತ್ತೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಹಾಡುಹಗಲೇ ಕೊಲೆ ಮಾಡಿರುವ ಘಟನೆ  ರಾಯಚೂರು ಜಿಲ್ಲೆಯ ಲಿಂಗಸೂಗುರು ತಾಲೂಕಿನ ಗೌಡೂರು-ಗುರುಗುಂಟ ಮಧ್ಯೆ ಸಂಭವಿಸಿದೆ.

    ಪೈದೊಡ್ಡಿ ಗ್ರಾಮದ ಗ್ರಾಮ ಪಂಚಾಯತಿ ಸದಸ್ಯ ಹನುಮಂತ ಎಂಬ ವ್ಯಕ್ತಿಯ ಕೊಲೆ ನಡೆದಿದೆ. ಮೂವರು ದುಷ್ಕರ್ಮಿಗಳು ಬೈಕಿನಲ್ಲಿ ಬಂದು ಕೊಲೆ ಮಾಡಿ ಪರಾರಿಯಾಗಿದ್ದಾರೆ.

    ಹರಿತವಾದ ಆಯುಧಗಳಿಂದ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಹನಮಂತ ಸಾವಿಗೀಡಾಗಿದ್ದಾನೆ. ರಸ್ತೆಯ ಮಧ್ಯೆದಲ್ಲೇ ಹೊಡೆದ ಪರಿಣಾಮ ರಕ್ತದ ಮಡುವಿನಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.

    ಹಟ್ಟಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಬೈಕ್ ಹೋಗಿರುವ ಮಾರ್ಗದ ಬಗ್ಗೆ ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ. ರಸ್ತೆಯಲ್ಲೇ ಬಿದ್ದ ಹನಮಂತನ ಶವವನ್ನ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

  • ಏ ಕಟಿಗಲೇ.. ಅಲ್ಲೇಪಾ ಅದ್ …. ?-  ಬಲೆ ನೋಡಿ ಅಲ್ಲಿದ್ದವರೆಲ್ಲ ಓಡಿದ್ದೇ ಓಡಿದ್ದು..

    ಉತ್ತರಕನ್ನಡ: ಮೀನು ಹಿಡಿಯಬೇಕೆಂದು ಸಮುದ್ರಕ್ಕೆ ಇಳಿದ ಮೀನುಗಾರರು ಬಲೆಯಲ್ಲಿ ದೊಡ್ಡದೊಂದು ಮೀನು ಸಿಕ್ಕಿದೆ ಎಂದು ದಂಡೆಗೆ ಬಂದು ನೋಡಿದಾಗ ಅದು ಮೀನಾಗಿರಲಿಲ್ಲ.. ಮೊಸಳೆಯಾಗಿತ್ತು..!

    ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಅಳ್ಬಕೋಡಿಯಲ್ಲಿ ಮೀನುಗಾರರು ಶಾಕ್ ಆಗಿದ್ದಾರೆ. ಸಮುದ್ರದ ಅಬ್ಬರ ಹೆಚ್ಚಿರುವ ಕಾರಣ ಮೀನುಗಾರರು ಅಳ್ಬೆಕೋಡಿಯ ಸಮುದ್ರದ ಭಾಗದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ನಡೆಸ್ತಾಯಿದ್ದರು. ಇನ್ನೇನು ಬಲೆಗೆ ಭಾರೀ ಮೀನು ಸಿಕ್ಕೇಬಿಡ್ತು ಅಂತಾ ಸಂತೋಷದಲ್ಲಿದ್ದ ಮೀನುಗಾರರು ದಡಕ್ಕೆ ಬಲೆಯನ್ನು ಎಳೆದಾಗ  ಅವರಿಗೆ ಅಚ್ಚರಿ ಕಾದಿತ್ತು. ಬಲೆಯಲ್ಲಿ ಮೀನುಗಳ ರಾಶಿಯೊಂದಿಗೆ ಭಾರೀ ಗಾತ್ರದ ಮೊಸಳೆಯೂ ಸಿಕ್ಕಾಕ್ಕೊಂಡಿತ್ತು. ಒಂದೊಮ್ಮೆ ಮೊಸಳೆ ಕಂಡಾಗ ಮೀನುಗಾರರು ಅಚ್ಚರಿ ಪಟ್ಟರು.

    ಕೊನೆಗೂ ಮೊಸಳೆಯನ್ನು ಬಲೆಯ ಬಂಧನದಿಂದ ಬಿಡಿಸಿ ಸಂಬಂಧಪಟ್ಟ ಅಧಿಕಾರಿಗಳ ಮೂಲಕ ಸುರಕ್ಷಿತ ಸ್ಥಳಕ್ಕೆ ಬಿಡಲಾಯಿತು.