Posts Slider

Karnataka Voice

Latest Kannada News

ನಲವಡಿ ಟೋಲ್ ಬಳಿಯೇ ಹೊತ್ತಿ ಉರಿದ “ಟಾಟಾ ಮಾಂಜಾ ಕಾರು”- ಕೈಕಟ್ಟಿಕೊಂಡು ನಿಂತ ಟೋಲ್ ಸಿಬ್ಬಂದಿ…

1 min read
Spread the love

ಹುಬ್ಬಳ್ಳಿ: ಕಂದಾಯ ಇಲಾಖೆಯಲ್ಲಿ ಪ್ರಥಮ ದರ್ಜೆಯ ಸಹಾಯಕನೋರ್ವ ಹುಬ್ಬಳ್ಳಿಯಿಂದ ಗದಗಿಗೆ ಹೋಗುತ್ತಿದ್ದ ಸಮಯದಲ್ಲಿ ನಲವಡಿ ಟೋಲ್‌ಗಂಟಿಕೊಂಡೇ ಕಾರಿಗೆ ಬೆಂಕಿ ತಗುಲಿದ್ದು, ಟೋಲ್ ಸಿಬ್ಬಂದಿಗಳು ಕೈಕಟ್ಟಿಕೊಂಡು ಕಾರನ್ನ ಸುಡಲು ಬಿಟ್ಟ ಘಟನೆ ಕಳೆದ ರಾತ್ರಿ ಸಂಭವಿಸಿದೆ.

ಗದಗಿನ ಶಿದ್ದಲಿಂಗನಗರದ ಸುನೀಲ ಪಾಟೀಲ ಎಂಬುವವರು ತಮ್ಮ ಗೆಳೆಯನೊಂದಿಗೆ ಹುಬ್ಬಳ್ಳಿಗೆ ಬಂದು ಮರಳಿ ಹೋಗುವಾಗ ಆಕಸ್ಮಿಕವಾಗಿ ಕಾರಿಗೆ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಕರಕಲಾಗಿದೆ.

ವೀಡಿಯೋ….

ಟೋಲ್‌ನಲ್ಲಿ ಕಡ್ಡಾಯವಾಗಿ ಇರಿಸಬೇಕಾದ ಯಾವುದೇ ಪರಿಕರಗಳು ಇರದೇ ಇರುವುದು ಘಟನೆಗೆ ಕಾರಣವಾಗಿದೆ. ಈ ಬಗ್ಗೆ ಪೊಲೀಸರು ಕಠಿಣ ಕ್ರಮ ಜರುಗಿಸುವಂತೆ ನೋಡಗರು ಆಗ್ರಹಿಸಿದ್ದಾರೆ.

ಪ್ರಕರಣವೂ ಅಣ್ಣಿಗೇರಿ ಠಾಣೆಯಲ್ಲಿ ದಾಖಲಾಗಿದೆ.


Spread the love

Leave a Reply

Your email address will not be published. Required fields are marked *