Posts Slider

Karnataka Voice

Latest Kannada News

ಡ್ಯೂಟಿಗೆ ಹೋಗುತ್ತಿದ್ದಾಗ ಸಿಎಆರ್ ಪೊಲೀಸರಿಗೆ ಹಿಗ್ಗಾಮುಗ್ಗಾ ಥಳಿತ…!

1 min read
Spread the love

ಧಾರವಾಡ: ಹುಬ್ಬಳ್ಳಿ-ಧಾರವಾಡ ಸಶಸ್ತ್ರ ಮೀಸಲು ಪಡೆಯ ಕಚೇರಿಗೆ ಹೋಗುತ್ತಿದ್ದ ಇಬ್ಬರು ಪೊಲೀಸ್ ಕಾನ್ಸಟೇಬಲ್ ಗಳನ್ನ ಮೂವರು ಕುಡಿತದ ಅಮಲಿನಲ್ಲಿ ಬೈಕ್ ಅಡ್ಡಗಟ್ಟಿ ಹಿಗ್ಗಾ-ಮುಗ್ಗಾ ಥಳಿಸಿರುವ ಘಟನೆ ತಾಲೂಕಿನ ಇಟಿಗಟ್ಟಿ ಕ್ರಾಸ್ ಬಳಿ ಸಂಭವಿಸಿದೆ.

ತಡರಾತ್ರಿ ಘಟನೆ ನಡೆದಿದ್ದು ಉಪ್ಪಿನಬೆಟಗೇರಿ ಮೂಲದ ನಾಗೇಶ ಬ್ಯಾಟಗೇರ ಹಾಗೂ ಉದಯ ಭಂಡಾರಿ ಎಂಬುವವರನ್ನ ಥಳಿಸಲಾಗಿದೆ. ಧಾರವಾಡದಲ್ಲಿ ರೂಮ್ ಮಾಡಿಕೊಂಡಿರುವ ಇಬ್ಬರು ಯೂನಿಫಾರ್ಮ್ ಹಾಕಿಕೊಂಡು ಹೋಗುವಾಗ, ಮೂವರು ಬೈಕ್ ನ್ನ ಅಡ್ಡಗಟ್ಟಿ ಹೊಡೆದಿದ್ದಾರೆ.

ಘಟನೆಯಲ್ಲಿ ನಾಗೇಶ ಬ್ಯಾಟಗೇರ ಎಂಬುವವರಿಗೆ ತೀವ್ರ ಥರದ ಗಾಯಗಳಾಗಿದ್ದು, ಮತ್ತೋರ್ವರಿಗೆ ಒಳಪೆಟ್ಟುಗಳಾಗಿವೆ. ತಕ್ಷಣವೇ ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಹಾಗೂ ಪೊಲೀಸ್ ಕಮೀಷನರ್ ಲಾಬುರಾಮ್ ಅವರು ಭೇಟಿ ನೀಡಿದ್ದರೆಂದು ಗೊತ್ತಾಗಿದೆ.

ಘಟನೆಯಲ್ಲಿ ಹಲ್ಲೆಗೊಳಗಾದ ಇಬ್ಬರನ್ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಗುಣಮುಖರಾಗುತ್ತಿದ್ದಾರೆ. ಹಲ್ಲೆ ಮಾಡಿ ಪರಾರಿಯಾಗಿರುವವರ ಬಗ್ಗೆ ಇನ್ನೂವರೆಗೂ ಯಾವುದೇ ಮಾಹಿತಿ ಸಿಕ್ಕಿಲ್ಲವಾದರೂ, ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.


Spread the love

Leave a Reply

Your email address will not be published. Required fields are marked *