ಹುಬ್ಬಳ್ಳಿ “ಕೆನರಾ ಬ್ಯಾಂಕ್ ಮ್ಯಾನೇಜರ್”ಗೆ 62 ಲಕ್ಷದ ‘ಟೋಪಿ’ ಹಾಕಿದ ವಂಚಕರು…

ಹುಬ್ಬಳ್ಳಿ: ಹಣವಂತ ಗ್ರಾಹಕರ ಹೆಸರು ಹೇಳಿಕೊಂಡು ಬ್ಯಾಂಕ್ ಮ್ಯಾನೇಜರಗೆ 62 ಲಕ್ಷ ರೂಪಾಯಿ ವಂಚನೆ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಹುಬ್ಬಳ್ಳಿಯ ರೇಲ್ವೆ ನಿಲ್ದಾಣದ ಬಳಿಯ ಕೆನರಾ ಬ್ಯಾಂಕಿನ ಮ್ಯಾನೇಜರ್ ಶಂಕರ ಸುಧಾಕರ ಮಿಶ್ರಾ ಎಂಬಾತರೇ ಮೋಸ ಹೋಗಿದ್ದಾರೆ. ಇವರಿಗೆ ಸುಭಾಸ ಜವಳಿ ಎಂಬ ಗ್ರಾಹಕರ ಹೆಸರಿನಲ್ಲಿ ಸಂಪರ್ಕಿಸಿ ಒಟ್ಟು 6030649 ರೂಪಾಯಿ ವಂಚಿಸಿದ್ದಾರೆ.
ನಕಲಿ ಇ ಮೇಲ್ ಮೂಲಕ ವಂಚನೆ ಮಾಡಿರುವುದಾಗಿ ಬ್ಯಾಂಕ್ ಮ್ಯಾನೇಜರ್ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.