ಧಾರವಾಡ “ಬಸ್ಟ್ಯಾಂಡ್ ಕಳ್ಳಿ”ಯ ಬಂಧನ…!
1 min readಧಾರವಾಡ: ಹೊಸ ಬಸ್ ನಿಲ್ದಾಣದಲ್ಲಿ ನಡೆಯುತ್ತಿದ್ದ ಕಳ್ಳತನದ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮವನ್ನ ಜರುಗಿಸಿದ ಹಿನ್ನೆಲೆಯಲ್ಲಿ ಓರ್ವ ಮಹಿಳಾ ಆರೋಪಿಯನ್ನ ಪತ್ತೆ ಮಾಡುವಲ್ಲಿ ಧಾರವಾಡ ಉಪನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನ ಬೆಳಗಾವಿಯ ರಿಜ್ವಾನಾ ಶಕೀಲ ಶಹಬಾಜಖಾನ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಯಿಂದ 40 ಗ್ರಾಂ ತೂಕದ ಬಂಗಾರದ ಬಳೆ ಹಾಗೂ 30 ಗ್ರಾಂ ತೂಕದ ಚಿನ್ನದ ಸರವನ್ನ ವಶಕ್ಕೆ ಪಡೆಯಲಾಗಿದ್ದು, ಇವುಗಳ ಮೊತ್ತ ಅಂದಾಜು 2.10.000 ಎಂದು ಹೇಳಲಾಗಿದೆ.
ಮಹಿಳೆಯನ್ನ ತನಿಖೆಗೆ ಒಳಪಡಿಸಿದಾಗ ಉಪನಗರ ಠಾಣೆಯಲ್ಲಿ ಈ ಹಿಂದೆ ದಾಖಲಾದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದ್ದು ಎಂಬುದು ಗೊತ್ತಾಗಿದ್ದು, ಕಳೆದುಕೊಂಡ ಪ್ರಯಾಣಿಕರು ಈ ಹಿಂದೆ ದೂರು ನೀಡಿದ್ದರು.
ಡಿಸಿಪಿಗಳಾದ ಕೆ.ರಾಮರಾಜನ್ ಹಾಗೂ ಆರ್.ಬಿ.ಬಸರಗಿ ಮಾರ್ಗದರ್ಶನದಲ್ಲಿ ಉಪನಗರ ಠಾಣೆಯ ಇನ್ಸಪೆಕ್ಟರ್ ಪ್ರಮೋದ ಯಲಿಗಾರ ಹಾಗೂ ಸಿಬ್ಬಂದಿಗಳು ಆರೋಪಿಗಯನ್ನ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.