Posts Slider

Karnataka Voice

Latest Kannada News

ಧಾರವಾಡದಲ್ಲಿ “ಜೀವ ಸುಟ್ಟು ಕರಲಾಗಿದ್ದರ” ಹಿಂದಿನ ರಹಸ್ಯವೇನು ಗೊತ್ತಾ.. ಜನ್ಮದಾತೆ ಹೇಳಿದ್ದೇನು…!?

Spread the love

ಧಾರವಾಡ: ನಗರದ ನಗರೇಶ್ವರ ದೇವಸ್ಥಾನದ ಹಿಂಭಾಗದ ಮನೆಯೊಂದರಲ್ಲಿ ತಾಯಿ ಹೊರಗೆ ಹೋದಾಗಲೇ ವ್ಯಕ್ತಿಯೊಬ್ಬ ಮನೆಯಲ್ಲಿಯೇ ಸುಟ್ಟು ಜೀವಂತವಾಗಿಯೇ ಸಾವಿಗೀಡಾಗಿರುವ ಘಟನೆ ಹಲವು ಅನುಮಾನಗಳನ್ನ ಹುಟ್ಟು ಹಾಕಿದೆ.

36 ವರ್ಷದ ವಿನಾಯಕ ಚಿನಿವಾಲರ  ಎಂಬಾತ ಮನೆಗೆ ಬೆಂಕಿ ತಗುಲಿ ಸಾವಿಗೀಡಾದ ದುರ್ದೈವಿಯಾಗಿದ್ದಾನೆ. ಈತ ಕುಡಿದ ಮತ್ತಿನಲ್ಲಿರುತ್ತಿದ್ದ ಎಂದು ಹೇಳಲಾಗುತ್ತಿದೆಯಾದರೂ, ಅಂತಹ ಸಮಯದಲ್ಲಿ ಈತನ ತಾಯಿ ಹೊರಗೆ ಹೋಗಿದ್ದರ ಬಗ್ಗೆಯೂ ಕೆಲವು  ಪ್ರಶ್ನೆಗಳು ಮೂಡಿವೆ.

ಮನೆಗೆ ಬೆಂಕಿ ತಗುಲಿದ ಸಮಯದಲ್ಲಿ ಈತ ಒಳಗೆ ಇದ್ದನೆಂಬುದು ಯಾರಿಗೆ ಗೊತ್ತಿತ್ತು. ಇದರ ಹಿಂದೆ ಏನಾದರೂ ಮಸಲತ್ತು ನಡೆದಿದೇಯಾ ಎಂಬುದೀಗ ಸಂಶಯವಾಗಿದೆ.

ಶಹರ ಠಾಣೆಯ ಪೊಲೀಸರು ಈ ಬಗ್ಗೆ ಸಮಗ್ರವಾಗಿ ತನಿಖೆಯನ್ನ ಮಾಡಬೇಕಿದೆ. ಓರ್ವ ವ್ಯಕ್ತಿ ಸಜೀವವಾಗಿ ಸಾಯಲು ತೀರ್ಮಾನಿಸಿದ್ದನಾ, ಅದರ ಹಿಂದಿರುವ ಕಾರಣವೇನು.. ಬೆಂಕಿ ತಗುಲಿದ್ದು ಹೇಗೆ.. ಎಲ್ಲವಕ್ಕೂ ಉತ್ತರರ ಹುಡುಕಬೇಕಿದೆ.


Spread the love

Leave a Reply

Your email address will not be published. Required fields are marked *