ನವಲೂರ BRTS ಸೇತುವೆ ಕುಸಿತ- ಮೂವರು KRDCL ಅಧಿಕಾರಿಗಳು ತಪ್ಪಿತಸ್ಥರು…!!!

ಧಾರವಾಡ: ಅವಳಿನಗರದ ಬಿಆರ್ಟಿಎಸ್ ಮಾರ್ಗದ ನವಲೂರು ಬಳಿಯ ಸೇತುವೆ ಕುಸಿದ ಹಿನ್ನೆಲೆಯಲ್ಲಿ ನೀಡಿದ ದೂರನ್ನ ಪರಿಗಣಿಸಿರುವ ಲೋಕಾಯುಕ್ತ ಪೊಲೀಸರು, ಮೂವರು ಅಧಿಕಾರಿಗಳು ತಪ್ಪು ಎಸಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ನವಲೂರ ಸೇತುವೆ 03.10.2022 ರಂದು ಕಳಫೆ ಕಾಮಗಾರಿಯಿಂದ ಕುಸಿದಿದೆ ಎಂದು ಆರ್ಟಿಐ ಕಾರ್ಯಕರ್ತ ನಾಗರಾಜ ಕರೆಣ್ಣನವರ ಲೋಕಾಯುಕ್ತರಿಗೆ ದೂರನ್ನ ಸಲ್ಲಿಸಿದ್ದರು.
ಈ ಬಗ್ಗೆ ಸಮಗ್ರ ತನಿಖೆ ಕೈಗೊಂಡ ಇಲಾಖೆಯ ತಾಂತ್ರಿಕ ವಿಭಾಗವೂ ಕೆಆರ್ಡಿಸಿಎಲ್ನ ಕಾರ್ಯಪಾಲಕ ಅಭಿಯಂತರರಾದ ಆನಂದ ನವಲಿ, ಸೋಮಶೇಖರ ವಿ.ಸಿ ಹಾಗೂ ಸಹಾಯಕ ಅಭಿಯಂತರ ಉಮೇಶ ಬೇವೂರ ಕರ್ತವ್ಯಲೋಪ ಮಾಡಿದ್ದಾರೆಂದು ತಿಳಿಸಲಾಗಿದೆ.
ಈ ಮೂಲಕ ಆರ್ಟಿಐ ಕಾರ್ಯಕರ್ತ ನಾಗರಾಜ್ ಅವರ ಸಾರ್ವಜನಿಕ ಉದ್ದೇಶ ಈಡೇರಿದಂತಾಗಿದ್ದು, ತಪ್ಪಿತಸ್ಥರಿಗೆ ಸೂಕ್ತ ಕ್ರಮವಾಗಲಿದೆ.