BRTS ಮೊಂಡಾಟ “ಅಂಬ್ಯುಲೆನ್ಸ್ ಗೆ ದಂಡ”…!

ಹುಬ್ಬಳ್ಳಿ: ಅವಳಿನಗರದ ನಡುವಿನ ಬಿಆರ್ ಟಿಎಸ್ ಒಂದಿಲ್ಲಾ ಒಂದು ರಗಳೆಗೆ ಫೇಮಸ್ಸು ಆಗುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೆ. ಆದರೀಗ, ಒಂದು ಹೆಜ್ಜೆ ಮುಂದೆ ಹೋಗಿ, ಮತ್ತೊಂದು ಅವಘಡವನ್ನ ಮಾಡಿಕೊಂಡಿದ್ದು, ಜೀವ ಉಳಿಸುವ ಅಂಬ್ಯುಲೆನ್ಸಗೂ ದಂಡ ಹಾಕಿಸುವ ಮೂಲಕ, ಅಮಾನೀಯವಾಗಿ ನಡೆದುಕೊಂಡ ಘಟನೆ ನಡೆದಿದೆ.

ಧಾರವಾಡದಿಂದ ಹುಬ್ಬಳ್ಳಿಗೆ ಜನವೇರಿ 8ರಂದು ಹೋಗುವಾಗ ಧಾರವಾಡದ ಎಸ್ ಡಿಎಂ ಆಸ್ಪತ್ರೆ ಮುಂಭಾಗ, ಬಿಆರ್ ಟಿಎಸ್ ಮಾರ್ಗದಲ್ಲಿ ವಾಹನ ಹೋಗಿದೆ ಎಂದು ನೋಟೀಸನ್ನ ಬಿಆರ್ ಟಿಎಸ್ ಪೊಲೀಸರಿಗೆ ಮಾಹಿತಿಯನ್ನ ನೀಡಿದೆ. ಬಿಆರ್ ಟಿಎಸ್ ಮಾರ್ಗದಲ್ಲಿ ಅವರದ್ದೆ ಸಿಸಿಟಿವಿ ಇರುವುದರಿಂದ, ಆ ಮಾರ್ಗದಲ್ಲಿ ಹೋದ ವಾಹನಗಳ ಬಗ್ಗೆ ಮಾಹಿತಿ ಅವರಿಗಷ್ಟೇ ಇರುತ್ತದೆ.
ಬಿಆರ್ ಟಿಎಸ್ ನೀಡಿದ ಸೂಚನೆಯ ಮೇರೆಗೆ ವಾಹನಕ್ಕೆ ಫೆಬ್ರುವರಿ 7ರಂದು ನೋಟೀಸ್ ಜಾರಿಯಾಗಿದ್ದು, ವಾಹನ ಅಂಬ್ಯುಲೆನ್ಸ್ ಎಂದು ಹೇಳಿದರೂ, ಬಿಆರ್ ಟಿಎಸ್ ಸೂಚನೆಯ ಮೇರೆಗೆ ದಂಡವನ್ನ ಭರಿಸಿಕೊಂಡು ಕಳಿಸಲಾಗಿದೆ.

ಬಿಆರ್ ಟಿಎಸ್ ಮಾರ್ಗವನ್ನ ಅಂಬ್ಯುಲೆನ್ಸಗಳು ಬಳಸಬೇಕಾ ಅಥವಾ ಬೇಡವೋ ಎಂಬುದು ಈ ಘಟನೆಯಿಂದ ಯಕ್ಷಪ್ರಶ್ನೆಯಾಗಿದೆ. ಗಾಯಾಳುಗಳನ್ನ ಆಸ್ಪತ್ರೆಗೆ ರವಾನೆ ಮಾಡಲು, ಅಂಬ್ಯುಲೆನ್ಸ್ ನ ಅವಶ್ಯಕತೆ ಎಷ್ಟಿದೇಯೋ ಅಷ್ಟೇ, ಮಾರ್ಗದ ಅವಶ್ಯಕತೆಯೂ ಇದೆ.
ಈ ಪ್ರಕರಣದಿಂದ ಪೊಲೀಸರ ಮೇಲೆ ಗೂಬೆ ಕೂಡಿಸುವುದಕ್ಕೆ ಬಿಆರ್ ಟಿಎಸ್ ಮುಂದಾಗಿದೇಯಾ ಎಂಬ ಪ್ರಶ್ನೆಯೂ ಮೂಡಿದ್ದು, ಹಿರಿಯ ಅಧಿಕಾರಿಗಳು ಈ ಬಗ್ಗೆ ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕಾದ ಅವಶ್ಯಕತೆಯಿದೆ.