ಬಾರ್ಡರನಲ್ಲೊಂದು ವಿಶೇಷ ಮದುವೆ: ಕರ್ನಾಟಕದ ಹುಡುಗಿಗೆ ತಮಿಳುನಾಡಿನ ಹುಡುಗನಿಂದ ತಾಳಿ ಭಾಗ್ಯ
ಚಾಮರಾಜನಗರ: ಕೋರೋನಾ ಲಾಕ್ ಡೌನ್ 4.0 ಬಾರ್ಡರ್ ನಲ್ಲೊಂದು ವಿಶೇಷವಾದ ಮದುವೆಯಾಗಿದ್ದು, ಅಂತರ ರಾಜ್ಯ ಗಡಿ ದಾಟದೆ ಯುವ ಜೋಡಿಗಳು ಹಸೆಮಣೆ ಏರಿದ ಅಪರೂಪದ ಪ್ರಸಂಗ ಚಾಮರಾಜನಗರ ಜಿಲ್ಲೆಯ ಗಡಿ ಭಾಗದ ಪುಣಜನೂರು ಚೆಕ್ ಪೋಸ್ಟ್ ಬಳಿಯ ಗಣೇಶ ಗುಡಿಯಲ್ಲಿ ನಡೆಯಿತು.
ತಮಿಳುನಾಡಿನ ವರ ತಮ್ಮ ಗಡಿ ದಾಟಲಿಲ್ಲ, ಕರ್ನಾಟಕ ಗಡಿಯನ್ನ ವಧು ದಾಟಲಿಲ್ಲ ಅದ್ರೂ ಬಾರ್ಡರ್ ನಲ್ಲಿ ನಡದೇಹೋಯಿತು ಮದುವೆ. ರಾಜ್ಯದ ಕೊಡಗು ಜಿಲ್ಲೆಯ ಗೋಣಿಕೊಪ್ಪದ ಹೊಂಬಾಳಯ್ಯ, ತ್ರಿವೇಣಿ ದಂಪತಿ ಪುತ್ರಿ ಯಶಸ್ಮಿತ, ತಮಿಳುನಾಡಿನ ಮೆಟ್ಟುಪಾಳ್ಯಂ ನಿವಾಸಿ ಶಕ್ತಿವೇಲು ಲತಾ ದಂಪತಿ ಪುತ್ರ ಸತೀಶ್ ಕುಮಾರ್ ಗಡಿ ದಾಟದೆ ಮದುವೆ ಮಾಡಿಕೊಂಡರು. ಅಂತರ ರಾಜ್ಯ ಪ್ರವೇಶ ಅನುಮತಿ ನಿರಾಕರಣೆ ನಡುವೆ ಯುವ ಜೋಡಿ ಮತ್ತು ಪೋಷಕರು ಗಡಿಗೆ ಬಂದಿದ್ದರು. ಮದುವೆಗೆ ಸಾಕ್ಷಿಯಾದ ಚೆಕ್ ಪೋಸ್ಟ್ ಕರ್ತವ್ಯ ನಿರತ ಸಿಬ್ಬಂದಿಗಳು. ತಾಳಿ ಕಟ್ಟಿದ ನಂತರ ಸಿಹಿ ತಿಂದು ತಮ್ಮ ತಮ್ಮ ತವರಿಗೆ ತೆರಳಿದ ವಧು ವರ. ಮದುವೆ ವೇಳೆ ವಧು, ವರನ ತಂದೆ ತಾಯಿ, ಬೆರಳೆಣಿಕೆ ಚೆಕ್ ಪೋಸ್ಟ್ ಸಿಬ್ಬಂದಿ ಹಾಜರಿದ್ದರು. ಇಂತಹ ಸಮಯದಲ್ಲೂ ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ಸಪ್ತಪದಿ ತುಳಿದರು. ನಿಗದಿ ಪಡಿಸಿದ ದಿನಾಂಕದಂದೆ ಹಸೆ ಮಣೆ ಏರಿದ ಯುವತಿ-ಲಾಕ್ ಡೌನ್ ನಡುವೆ ಗಡಿ ದಾಟದೆ ಸಾಂಸಾರಿಕ ಜೀವನಕ್ಕೆ ಕಾಲಿಟ್ಟ ಯುವಕ.
