Posts Slider

Karnataka Voice

Latest Kannada News

ಮೀನುಗಾರಿಕೆ ಬೋಟ್ ಮುಳುಗಡೆ: ಐವರು ಪ್ರಾಣಾಪಾಯದಿಂದ ಪಾರು: 80ಲಕ್ಷ ನಷ್ಟ

Spread the love

ಉಡುಪಿ: ಮೀನುಗಾರಿಕೆಗೆ ತೆರಳಿ ಮರಳುವ ಸಮಯದಲ್ಲಿ ಮಲ್ಪೆ ಬಂದರು ಸಮೀಪ ರೇಷ್ಮಾ ಖಾರ್ವಿ ಅವರಿಗೆ ಸೇರಿದ ಶ್ರೀ ಸ್ವರ್ಣರಾಜ್ ಆಲ ಬಂಡೆಗೆ ಬಡಿದ ಪರಿಣಾಮ ಬೋಟ್ ಮುಳುಗಡೆಯಾದ ಘಟನೆ ನಡೆದಿದೆ.

ಮೇ 14 ರಂದು ಮಲ್ಪೆಯಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿತ್ತು. ಮೇ 19 ರಂದು ವಾಪಾಸ್ ಆಗುವಾಗ ಆಚಾತುರ್ಯ ನಡೆದಿತ್ತು. ಬೋಟ್ ನ‌ ಸ್ಟೇರಿಂಗ್ ಕಟ್ ಆಗಿ ನಿಯಂತ್ರಣ ತಪ್ಪಿ ಬಂಡೆ ಢಿಕ್ಕಿ ಹೊಡೆದಿತ್ತು. ಪಕ್ಕದಲ್ಲಿದ್ದ ಇನ್ನೊಂದು ದೋಣಿಯವರಿಂದ ಬೋಟ್ನಲ್ಲಿದ್ದ 6 ಜನರ ರಕ್ಷಣೆ ಮಾಡಲಾಗಿದೆ. ಸುಮಾರು 5 ಲಕ್ಷ ಮೌಲ್ಯದ ಮೀನು, ಬಲೆ, ಡಿಸೇಲ್ ಸಮುದ್ರ ಪಾಲಾಗಿದೆ. 80 ಲಕ್ಷ ರೂಪಾಯಿ ನಷ್ಟ ಅಂದಾಜು, ಕೇಸು ದಾಖಲಿಸಿಕೊಂಡಿರುವ ಕರಾವಳಿ‌ ಪೊಲೀಸ್ರು ತನಿಖೆ ಕೈಗೊಂಡಿದ್ದಾರೆ.


Spread the love

Leave a Reply

Your email address will not be published. Required fields are marked *