Posts Slider

Karnataka Voice

Latest Kannada News

ಬಿಜೆಪಿ MLC ಕೆ.ಪಿ.ನಂಜುಡಿ ರಾಜೀನಾಮೆ: ನಮ್ಮ ಸಮಾಜಕ್ಕೆ ಏನು ಮಾಡಲೇ ಇಲ್ಲ ಭಾಜಪಾ…!!!

1 min read
Spread the love

ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷದ ವಿಧಾಪರಿಷತ್ ಸದಸ್ಯ ಕೆ.ಪಿ.ನಂಜುಡಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ತಮ್ಮ ಸಮಾಜಕ್ಕೆ ಏನೂ ಮಾಡಲೇ ಇಲ್ಲವೆಂದು ಬೇಸರವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿಯಲ್ಲಿರುವ ಸಭಾಪತಿ ಬಸವರಾಜ ಹೊರಟ್ಟಿಯವರ ನಿವಾಸಕ್ಕೆ ಆಗಮಿಸಿದ ಕೆ.ಪಿ.ನಂಜುಡಿ ಅವರು ರಾಜೀನಾಮೆಯನ್ನ ನೀಡಿದರು.

ಈ ಸಮಯದಲ್ಲಿ ಮಾತನಾಡಿದ ನಂಜುಡಿ, ಬಿಜೆಪಿ ಕಾರ್ಯಕರ್ತರಿಗೆ, ಪಕ್ಷದ ಮುಖಂಡರಿಗೆ ಧನ್ಯವಾದ ತಿಳಿಸುವೆ. ರಾಜಕೀಯ ನನ್ನ ವೃತ್ತಿ ಅಲ್ಲ, ನನ್ನ ಸಮಾಜದ ಉಳಿವಿಗಾಗಿ ನಾನು ರಾಜಕೀಯ ಬಂದಿದ್ದೆ. ಹಿಂದುಳಿದ ವರ್ಗಗಳ ಧ್ವನಿಯಾಗಿ ನನ್ನನ್ನು ಬಳಸಿಕೊಳ್ಳುತ್ತಾರೆ ಎಂದು ಬಿಜೆಪಿ ಸೇರಿದ್ದೆ. ಬರೀ ಎಂಎಲ್‌ಸಿ ಮಾಡಿದ್ರೆ ನಮ್ಮ ಸಮಾಜ ಉದ್ಧಾರ ಆಗಲ್ಲ. ನಮ್ಮ ಸಮಾಜಕ್ಕೆ ಏನು ಮಾಡಿಲ್ಲ. ಎಂಎಲ್‌ಸಿ ಎನ್ನುವುದು ಗೌರವ, ಅಧಿಕಾರ ಅಲ್ಲಾ. ಎಂಎಲ್‌ಸಿ ಮಾಡಿದ್ರೆ ಸಮಾಜಕ್ಕೆ ಎಲ್ಲಾ ಸಿಗುತ್ತೆ ಎನ್ನುವುದು ತಪ್ಪು. ನಾನು ಮೋದಿ ಬಗ್ಗೆ, ಪಕ್ಷದ ಬಗ್ಗೆ ಏನು ಮಾತನಾಡಲ್ಲ. ಆದರೆ ಪಕ್ಷದಲ್ಲಿ ನನ್ನನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದರು.


Spread the love

Leave a Reply

Your email address will not be published. Required fields are marked *