ಒಂದೇ ಮನವಿಗೆ ‘216’ಜನರಿಂದ ಕಣ್ಣು ದಾನ: ‘ಅಮೃತ ನೇತ್ರ’- ಧಾರವಾಡ ಶಾಸಕರ ಮಾದರಿ ಕೆಲಸ….!

ಧಾರವಾಡ: ಚಿತ್ರನಟ ಪುನೀತ ರಾಜಕುಮಾರ ನಿಧನದ ನಂತರ ತಮ್ಮ ಬರ್ತಡೆಯನ್ನ ವಿಭಿನ್ನವಾಗಿ ಆಚರಿಸಿಕೊಂಡ ಧಾರವಾಡ-71 ಕ್ಷೇತ್ರದ ಶಾಸಕ ರಾಜ್ಯಕ್ಕೆ ಮಾದರಿಯಾಗಿದ್ದಾರೆ.

ಶಾಸಕ ಅಮೃತ ದೇಸಾಯಿ ಅವರು ತಮ್ಮ ಹುಟ್ಟುಹಬ್ಬವನ್ನ ಜನಹಿತಕ್ಕಾಗಿ ಬಳಕೆ ಮಾಡಲು ತೀರ್ಮಾನಿಸಿ, ಸ್ವತಃ ತಮ್ಮ ಮಡದಿಯೊಂದಿಗೆ ಕಣ್ಣು ದಾನವನ್ನ ಮಾಡಿದ್ದರು. ಅಷ್ಟೇ ಅಲ್ಲ, ತಮ್ಮ ಕಾರ್ಯಕರ್ತರಲ್ಲಿ ಮನವಿಯನ್ನೂ ಮಾಡಿಕೊಂಡಿದ್ದರು.
ಶಾಸಕರ ಮನವಿಗೆ ಸ್ಪಂಧಿಸಿರುವ 216 ಜನರು ತಮ್ಮ ಕಣ್ಣು ದಾನವನ್ನ ಮಾಡಿದ್ದು, ಪ್ರತಿಯೊಬ್ಬರು ಸ್ವ ಇಚ್ಚೆಯಿಂದ ಬರೆದುಕೊಟ್ಟಿದ್ದಾರೆ. ಹೀಗಾಗಿ ಮಾದರಿಯ ಕೆಲಸವಾಗಿದೆ.
ಶಾಸಕ ಅಮೃತ ದೇಸಾಯಿಯವರು ನೀಡಿದ, ಒಂದೇ ಒಂದು ಮನವಿಯ ಮೇರೆಗೆ ಇಷ್ಟೊಂದು ಜನರು ಕಣ್ಣು ದಾನ ಮಾಡಿದ್ದು ವಿಶೇಷವಾಗಿದೆ.