“ಕೈ ಕೈ ಮುಗಿದು” ತಪ್ಪಾಗಿದೆ ಎಂದ ಧಾರವಾಡ ಬಿಜೆಪಿ ಜಿಲ್ಲಾಧ್ಯಕ್ಷ….

ಹುಬ್ಬಳ್ಳಿ: ಗ್ರಾಮ ಪಂಚಾಯತಿ ಸದಸ್ಯರಿಗೆ ಭಾರತೀಯ ಜನತಾ ಪಕ್ಷದಿಂದ ನಡೆಸಲಾಗಿದ್ದ ಸತ್ಕಾರ ಕಾರ್ಯಕ್ರಮಕ್ಕೆ ವಿಧಾನಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ ಅವರನ್ನ ಕರೆಯದೇ ಇರುವುದಕ್ಕೆ ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳಮಠ ಬಹಿರಂಗವಾಗಿ ಕ್ಷಮೆ ಕೋರಿದರು.
ತಮ್ಮನ್ನು ಭೇಟಿಯಾದ ಮಾಧ್ಯಮದವರೊಂದಿಗೆ ಮಾತನಾಡಿದ ಬಸವರಾಜ ಅವರು, ಆಕಸ್ಮಿಕವಾಗಿ ನಡೆದಿದೆ. ನಂದು ತಪ್ಪಾಗಿದೆ ಎಂದು ಕೈ ಕೈ ಮುಗಿದರು.
ಪೂರ್ಣ ವೀಡಿಯೋ…
ತೀವ್ರ ಧಾವಂತದಲ್ಲಿ ಇರುವಂತೆ ಕಂಡು ಬಂದ ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳಮಠ ಅವರು, ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲು ಹಿಂಜರಿದರು.