ಬಿಜೆಪಿಯ “ಗಂಡ-ಹೆಂಡತಿ” ಭಾವಚಿತ್ರಕ್ಕೆ ಬೆಂಕಿಯಿಟ್ಟ ಬಿಜೆಪಿಗರು….

ಹುಬ್ಬಳ್ಳಿ: ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಗೆದ್ದು, ಮೇಯರ್ ಚುನಾವಣೆ ಸಮಯದಲ್ಲಿ ಬಿಜೆಪಿಗೆ ಕೈಕೊಟ್ಟ ಹಿನ್ನೆಲೆಯಲ್ಲಿ ಬಿಜೆಪಿಯವರು ಪಾಲಿಕೆ ಸದಸ್ಯೆಯ ಮನೆ ಮುಂದೆ ಪ್ರತಿಭಟನೆ ನಡೆಸಿದರು.
ಸರಸ್ವತಿ ವಿನಾಯಕ ದೋಂಗಡಿಯವರೇ ಮೇಯರ್ ಚುನಾವಣೆಯ ವೇಳೆ ಬಾರದೇ ದೂರವುಳಿದಿದ್ದರು. ಹೀಗಾಗಿ ಪ್ರತಿಭಟನೆ ನಡೆದಿತ್ರು.
ಹೋರಾಟದ ದೃಶ್ಯಾವಳಿಗಳು ಇಲ್ಲಿವೆ ನೋಡಿ…
ಹುಬ್ಬಳ್ಳಿ ಧಾರವಾಡ ಮಹಾ ನಗರ ಪಾಲಿಕೆಯ ಮೇಯರ್ ಉಪ ಮೇಯರ್ ಚುನಾವಣೆಯಲ್ಲಿ ಸರಸ್ವತಿ ವಿನಾಯಕ್ ದೊಂಗಡಿ ಅವರು ಬಿಜೆಪಿ ಪಕ್ಷಕ್ಕೆ ಮತ ಚಲಾವಣೆ ಮಾಡಿಲ್ಲ. ಮುಂದೆ ಕೂಡ ಈ ರೀತಿ ಮಾಡಬಾರದೆಂದು ಪ್ರತಿಭಟನೆ ಮಾಡಿ, ಸಂದೇಶ್ ರವಾನಿಸಿಲಾಯತ್ತು
ಈ ಸಂದರ್ಭದಲ್ಲಿ ಗುರುನಾಥ ವಿರಾಪುರ, ಮೋಹನ್ ಬೋರುಡೆ, ಡಿ. ರಘು, ವಿನಾಯಕ ಕಲಾದಗಿ, ಅಶೋಕ ಮುದ್ದಿ, ಸಂತೋಷ ಮುದ್ದಿ, ರವಿ ಬೀಲನಾ, ವಿನಾಯಕ್ ಶಂಕರ್ ಚವ್ಹಾಣ್ ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರು 54ನೇ ವಾರ್ಡಿನ ಎಲ್ಲಾ ಕಾರ್ಯಕರ್ತರು ಉಪಸ್ಥಿತರಿದ್ದರು.