Posts Slider

Karnataka Voice

Latest Kannada News

ತಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಕೋರ್ಟಗೆ ಮೊರೆ ಹೋದ 6 ಸಚಿವರು…!

Spread the love

ಬೆಂಗಳೂರು: ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬರಲು ಕಾರಣವಾದ ಮಂತ್ರಿಯೋರ್ವರ ವಿಷಯ ಹೊರಗೆ ಬಂದ ಮೇಲೆ, ಆರು ಸಚಿವರು ತಮ್ಮ ವಿರುದ್ಧ ಯಾವುದೇ ಸುದ್ದಿಗಳು ಪ್ರಸಾರ ಮಾಡದಂತೆ ಕೋರ್ಟಗೆ ಮೊರೆ ಹೋಗಿದ್ದಾರೆಂದು ಹೇಳಲಾಗಿದೆ.

ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿಯವರ ಸಿಡಿ ಸ್ಪೋಟಗೊಂಡ ನಂತರ ರಮೇಶ ಜಾರಕಿಹೊಳಿ ಮಾಜಿ ಸಚಿವರಾಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಅದೀಗ, ಚೂರು ಬೇರೆಯದ್ದೆ ಸ್ವರೂಪವನ್ನ ಪಡೆದಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಸಮ್ಮಿಶ್ರ ಸರಕಾರ ಬೀಳಲು ಕಾರಣವಾಗಿದ್ದ ಮತ್ತು ಹಾಲಿ ಸರಕಾರದಲ್ಲಿ ಸಚಿವರಾಗಿರುವ ಆರು ಪ್ರಮುಖರು, ಕೋರ್ಟಗೆ ಅರ್ಜಿಯನ್ನ ಹಾಕಿದ್ದು, ಎರಡು ದಿನದಲ್ಲಿ ಅದು ವಿಚಾರಣೆಗೆ ಬರಲಿದೆ ಎಂದು ಹೇಳಲಾಗಿದೆ.

ಉತ್ತರ ಕರ್ನಾಟಕ ಮತ್ತು ಮೈಸೂರು ಭಾಗದ ಹಾಗೂ ಬೆಂಗಳೂರು ಸುತ್ತಮುತ್ತಲಿನ ಪ್ರದೇಶದ ಆರು ಜನರು ನ್ಯಾಯಾಲಯಕ್ಕೆ ಹೋಗಿದ್ದು, ಅವರ ವಿರುದ್ಧ ಸುದ್ದಿಗಳನ್ನ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ಹಾಕುವಂತೆ ಕೋರಿದ್ದಾರೆಂದು ಹೇಳಲಾಗಿದೆ.


Spread the love

Leave a Reply

Your email address will not be published. Required fields are marked *