Posts Slider

Karnataka Voice

Latest Kannada News

ಬಿಜೆಪಿ ಮುಖಂಡನ ಬರ್ತಡೇಗೆ ಹಾಲಾಭಿಷೇಕ, ನೋಟುಗಳ ತೂರಾಟ….!

1 min read
Spread the love

ಕಲಬುರಗಿ: ತನ್ನ ಜನ್ಮದಿನದಂದು ಕಲಬುರಗಿ ಉತ್ತರ ಕ್ಷೇತ್ರದ ಬಿಜೆಪಿ ಮುಖಂಡ ಸೈನಿಕ್ ರಾಠೋಡ್ ಹಾಲಿನ ಅಭಿಷೇಕ ಮಾಡಿಸಿಕೊಂಡಿರುವ ಘಟನೆ ಕಲಬುರಗಿ ನಗರದ ಫಿಲ್ಟರ್ ಬೆಡ್ ಏರಿಯಾದಲ್ಲಿ ನಡೆದಿದೆ.

ಮೊನ್ನೆ ರಾತ್ರಿ ಸೈನಿಕ್ ರಾಟೋಡ್‌ನ ಬರ್ತಡೆಯನ್ನ ಫಿಲ್ಟರ್‌ಬೆಡ್ ಏರಿಯಾದಲ್ಲಿ ಅದ್ದೂರಿಯಾಗಿ ಆಯೋಜನೆ ಮಾಡಲಾಗಿತ್ತು. ಈ ವೇಳೆ ಸೈನಿಕ್ ರಾಠೋಡ್‌‌ರ ಮೇಲೆ ಬೆಂಬಲಿಗರು ಹಾಲಿನ ಅಭಿಷೇಕ ಮಾಡಿದ್ದಲ್ಲದೇ ಹಣ ಕೂಡ ಹಾರಿಸಿದ್ದಾರೆ.

ಸದ್ಯ ಸೈನಿಕ್ ರಾಠೋಡ್ ಬರ್ತಡೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಪರಿ ಹುಟ್ಟು ಹಬ್ಬ ಆಚರಣೆ ಮಾಡುವುದು ಬೇಕಿತ್ತಾ ಅಂತಾ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಶಿಸ್ತಿನ ಪಕ್ಷದಲ್ಲಿದ್ದವರು ಹಣವನ್ನ ತೂರುವುದು ಮತ್ತೂ ಹಾಲನ್ನ ಹಾಕಿಸಿಕೊಳ್ಳುವುದು ನೋಡುಗರಲ್ಲಿ ಪಕ್ಷದ ಬಗ್ಗೆ ಅನುಮಾನ ಮೂಡವಂತಾಗಿದೆ.


Spread the love

Leave a Reply

Your email address will not be published. Required fields are marked *

You may have missed