Posts Slider

Karnataka Voice

Latest Kannada News

ವಿದ್ಯಾರ್ಥಿಗಳ ಕ್ಷಮತೆಗಾಗಿ ಮುಂದಾದ ‘ಕ್ಷಮತಾ’- ಜೋಡೆತ್ತುಗಳು ಸಾಥ್…!

1 min read
Spread the love

ಹುಬ್ಬಳ್ಳಿ: ಜುಲೈ 19ರಿಂದ ಎಸ್ಎಸ್ಎಲ್ ಸಿ ಪರೀಕ್ಷೆಗಳ ಕ್ಷಣಗಣನೆ ಆರಂಭವಾಗುತ್ತಿದ್ದ ಹಾಗೇ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರೇರಿತ ಕ್ಷಮತಾ ಸೇವಾ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಮೆಡಿಕಲ್ ಕಿಟ್ ವಿತರಣೆ ಮಾಡಲಾಯಿತು.

ವಿದ್ಯಾರ್ಥಿಗಳಿಗೆ ಮಾಸ್ಕ್, ಸ್ಯಾನಿಟೈಜರ್, ಆ್ಯಕ್ಸಿಮೀಟರ್, ಉಷ್ಣತಾ ಮಾಪಕವುಳ್ಳ ವೈಧ್ಯಕೀಯ ಕಿಟ್ ಗಳನ್ನು ನೀಡಲಾಯಿತು. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರತಿಯೊಂದು ಶಾಲೆಗೂ ತಲುಪಿಸಲಾಗಿದೆ.

ಸಾಬೂನು ಮತ್ತು ಮಾರ್ಜಕ ನಿಗಮದ ನಿರ್ದೇಶಕ ಮಲ್ಲಿಕಾರ್ಜುನ ಸಾವುಕಾರ ನೇತೃತ್ವದಲ್ಲಿ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಂತೋಷ ಚವ್ಹಾಣ, ಬಿಜೆಪಿ ಮುಖಂಡರಾದ ಮಹೇಂದ್ರ ಕೌತಾಳ, ಅಶೋಕ ವಾಲ್ಮೀಕಿ, ಮಣಿಕಂಠ ಶ್ಯಾಗೋಟಿ, ಪ್ರವೀಣ ಹುರಳಿ, ಪವನ ಹಳ್ಯಾಳ, ಶೀಲನ್ ಝೇವಿಯರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *