ಹುಬ್ಬಳ್ಳಿಯ ಉಧ್ಯಮಿ “ವೀರೇಶ ಉಂಡಿ” ಕೂಡಾ ಬಿಜೆಪಿ ಪಾಲು…!?

ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ ಶೆಟ್ಟರ್ ಘರ್ ವಾಪಸ್ಸಿ ಸುದ್ದಿ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿರುವ ಬೆನ್ನೆಲೆ, ಧಾರವಾಡ ಜಿಲ್ಲೆಯ ಪಂಚಮಸಾಲಿ ಸಮಾಜದ ಜಿಲ್ಲಾ ಯುವ ಘಟಕದ ಅಧ್ಯಕ್ಷ , ಯುವ ಕಾಂಗ್ರೆಸ್ ಮುಖಂಡ, ಯುವ ಉದ್ಯಮಿ ತಮ್ಮ. ಅಪಾರ ಬೆಂಬಲಿಗರೊಂದಿಗೆ ಕೈ ತೋರೆಯಲಿದ್ದಾರೆಯೇ?
ಗುರುವಾರ ನವ ದೆಹಲಿಯಲ್ಲಿ ಬಿಜೆಪಿ ಕೇಂದ್ರ ನಾಯಕರ ಸಮ್ಮುಖದಲ್ಲಿ ಮಾಜಿ ಸಿಎಂ, ಹಾಲಿ ವಿಧಾನಪರಿಷತ್ ಸದಸ್ಯ ಜಗದೀಶ ಶೆಟ್ಟರ್ ಮತ್ತೆ ತವರಿಗೆ ಮರಳಿದ ನಂತರ ಇಂತಹದೊಂದು ಸುದ್ದಿ ಹರಿದಾಡ ತೊಡಗಿದೆ.
ಕಾಂಗ್ರೆಸ್ ಪಕ್ಷದ ಕಟ್ಟಾಳು ಆಗಿರುವ ವೀರೇಶ ಉಂಡಿ, ತಮ್ಮ ಅಪಾರ ಬೆಂಬಲಗರೊಂದಿಗೆ ಕೇಸರಿ ಪಾಳೆಯಕ್ಕೆ ಸೇರ್ಪಡೆಯಾಗುವುದು ಬಹುತೇಕ ಖಚಿತವಾಗಿದೆ ಎಂದು ನಂಬರ್ಹ ಮೂಲಗಳಿಂದ ತಿಳಿದು ಬಂದಿದೆ.
ಶೆಟ್ಟರ್, ಮತ್ತೆ ಬಿಜೆಪಿ ಸೇರ್ಪಡೆಯಿಂದ ಮರ್ಮಘಾತಕ್ಕೊಳ್ಳಗಾಗಿರುವ ಕಾಂಗ್ರೆಸ್ ಧಾರವಾಡ ಪಾಳೆಯದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದ್ದು ಸುಳ್ಳಲ್ಲ.