ಊರ್ “ಉರ್ಣಗೀ”- ಧಾರವಾಡ ಪೊಲೀಸ್ರ್ ಏನ್ ಮಾಡಿದ್ರ್ ಗೊತ್ತಾ….!?

ಧಾರವಾಡ: ದ್ವಿಚಕ್ರ ವಾಹನದ ಸೈಲೆನ್ಸರ್ ಬದಲಾವಣೆ ಮಾಡಿ ರಸ್ತೆಯಲ್ಲಿ ಧಿಮಾಕು ತೋರಿಸುತ್ತ ಜನರಿಗೆ ಕಿರಿಕಿರಿಯನ್ನುಂಟು ಮಾಡಿದ್ದ 13 ಸವಾರರಿಗೆ ಧಾರವಾಡ ಸಂಚಾರಿ ಠಾಣೆ ಪೊಲೀಸರು ಶಾಕ್ ನೀಡಿದ್ದಾರೆ.
ಇವತ್ತು ಅಗಸ್ಟ್ 15, ಪೊಲೀಸರು ಏನೂ ಮಾಡೋದಿಲ್ಲವೆಂಬ ನಂಬಿಕೆಯಿಂದ ರಸ್ತೆಗಿಳಿದವರ ಸ್ವಾತಂತ್ರ್ಯ ಅಂದರೇನು ಎಂಬುದನ್ನು ಪೊಲೀಸರು ಚೆನ್ನಾಗಿಯೇ ತೋರಿಸಿಕೊಟ್ಟಿದ್ದಾರೆ.
ವೀಡಿಯೋ…
ಇನ್ಸಪೆಕ್ಟರ್ ಮಲ್ಲನಗೌಡ ನಾಯ್ಕರ ನೇತೃತ್ವದಲ್ಲಿ ಎಎಸ್ಐಗಳಾದ ವಿರೇಶ ಬಳ್ಳಾರಿ, ಸೀತಾ ಕಟಗಿ ಸಿಬ್ಬಂದಿಗಳಾದ ಅಶ್ಪಾಕ ಬಡಕಾಶಪ್ಪನವರ, ವಿದ್ಯಾ ಭಜಂತ್ರಿ, ದ್ಯಾಮಣ್ಣ, ಬಸವರಾಜ ಹಿರೇರಿ, ಶಿವಾನಂದ ಸುತಗಟ್ಟಿ ಸೇರಿದಂತೆ ಹಲವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.