Posts Slider

Karnataka Voice

Latest Kannada News

ನವಲಗುಂದದ ಬಳಿ ಹುಬ್ಬಳ್ಳಿ ಯುವಕನ ದುರ್ಮರಣ…!

Spread the love

ಧಾರವಾಡ: ನವಲಗುಂದ ತಾಲೂಕಿನ ಅಮರಗೋಳ ಗ್ರಾಮದ ಹತ್ತಿರ ಬೈಕ್ ಸವಾರನೋರ್ವ ನಿಯಂತ್ರಣ ತಪ್ಪಿ ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.

ಹಳೇಹುಬ್ಬಳ್ಳಿ ಬಾಪೂಜಿ ಕಾಲೋನಿಯ ಉದಯಕುಮಾರ ಉಗರಗೋಳ ಎಂಬಾತನೇ ಸಾವಿಗೀಡಾದ ಯುವಕನಾಗಿದ್ದು, ಗುರುವಾರ ರಾತ್ರಿಯೇ ಘಟನೆ ನಡೆದಿದೆ ಎಂದು ಹೇಳಲಾಗಿದೆ.

ಘಟನಾ ಸ್ಥಳಕ್ಕೆ ಪಿಎಸ್ಐ ಜಯಪಾಲ ಪಾಟೀಲ ಅವರು ತೆರಳಿ, ಪರಿಶೀಲನೆ ನಡೆಸಿದ್ದಲ್ಲದೇ ಶವವನ್ನ ಮರಣೋತ್ತರ ಪರೀಕ್ಷೆಗಾಗಿ ನವಲಗುಂದ ಆಸ್ಪತ್ರೆಗೆ ರವಾನೆ ಮಾಡಿದ್ರು.

ಘಟನೆಯ ಬಗ್ಗೆ ಪ್ರಕರಣವನ್ನ ದಾಖಲು ಮಾಡಿಕೊಂಡಿರುವ ನವಲಗುಂದ ಠಾಣೆಯ ಪೊಲೀಸರು, ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ. ಯುವಕ ಯಾವ ಕಾರಣಕ್ಕೆ ಈ ಮಾರ್ಗದಿಂದ ಹೋಗುತ್ತಿದ್ದ ಎಂಬುದನ್ನೂ ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ.


Spread the love

Leave a Reply

Your email address will not be published. Required fields are marked *