Posts Slider

Karnataka Voice

Latest Kannada News

ಯರಿಕೊಪ್ಪದ ಬಳಿ ದುರ್ಘಟನೆ: ಧಾರವಾಡದ “ಸ್ಮಾರ್ಟಿ” ಅಮಿತ ಸಾವು, ಮತ್ತೋರ್ವನ ಸ್ಥಿತಿ ಗಂಭೀರ..

Spread the love

ಧಾರವಾಡ: ನಗರದ ಹೊರವಲಯದ ಯರಿಕೊಪ್ಪ ಕ್ರಾಸ್ ಬಳಿಯಲ್ಲಿ ಲಾರಿಯನ್ನ ಓವರ್ ಟೇಕ್ ಮಾಡಲು ಹೋಗಿ, ಬೈಕ್ ಅಪಘಾತವಾಗಿದ್ದು, ಸ್ಥಳದಲ್ಲಿಯೇ ಓರ್ವ ಯುವಕ ಸಾವಿಗೀಡಾಗಿ, ಮತ್ತೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಧಾರವಾಡದ ಮದಿಹಾಳದ ನಿವಾಸಿ ಅಮಿತಸಿಂಗ್ ಎಂಬ 23 ವರ್ಷದ ಯುವಕ ಸಾವಿಗೀಡಾಗಿದ್ದಾನೆ. ಈತನ ಪ್ರೀತಿಯಿಂದ ಜಾಕ್ ಎಂದು ಕರೆಯುತ್ತಿದ್ದರು. ಛಾಯಾಗ್ರಾಹಕನಾಗಿಯೂ ಕಾರ್ಯನಿರ್ವಹಿಸುತ್ತಿದ್ದ ಎಂದು ಹೇಳಲಾಗಿದೆ.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಯುವಕನನ್ನ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.


Spread the love

Leave a Reply

Your email address will not be published. Required fields are marked *