ಕನ್ನಡದ ಬಿಗ್ಬಾಸ್ ಸೆಟ್ನಲ್ಲೇ “ಆ ಸ್ಪರ್ಧಿ” ಅರೆಸ್ಟ್….
1 min readಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ನ ಸ್ಪರ್ಧಿಯೊಬ್ಬರನ್ನ ಅರಣ್ಯ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ.
ವರ್ತೂರು ಸಂತೋಷ ಎಂಬ ಸ್ಪರ್ಧಿಯನ್ನ ಬಂಧನ ಮಾಡಲಾಗಿದ್ದು, ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ದೂರು ದಾಖಲು ಮಾಡಿಕೊಳ್ಳಲಾಗಿದೆ.
ವರ್ತೂರು ಸಂತೋಷ, ತನ್ನ ಕೊರಳಲ್ಲಿ ಹುಲಿಯ ಉಗುರು ಹಾಕಿಕೊಂಡಿದ್ದಾನೆಂದು ವನ್ಯಪ್ರಾಣಿ ಪ್ರೀಯರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಬಿಗ್ಬಾಸ್ ಮನೆಯಿಂದ ಕಳೆದ ರಾತ್ರಿ ಸತೀಶನನ್ನ ವಶಕ್ಕೆ ಪಡೆಯಲಾಗಿದೆ.
ಕನ್ನಡದ ಬಿಗ್ಬಾಸ್ ಸೀಸನ್ ಹತ್ತನೆಯದ್ದಾಗಿದ್ದು, ಖ್ಯಾತ ಚಿತ್ರನಟ ಸುದೀಪ ನಡೆಸಿಕೊಡುತ್ತಿದ್ದಾರೆ.