ಧಾರವಾಡ ಶಹರಕ್ಕೆ ಬಿಈಓ ಆಗಿ ಗಿರೀಶ ಪದಕಿ ಪದಗ್ರಹಣ..!

ಧಾರವಾಡ: ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯ ಘಟಕ ಧಾರವಾಡ ಹಾಗೂ ಕರ್ನಾಟಕ ರಾಜ್ಯ ಖಾಸಗಿ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಧಾರವಾಡ ಶಹರದ ವತಿಯಿಂದ ಧಾರವಾಡ ಶಹರಕ್ಕೆ ನೂತನವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಗಿರೀಶ ಪದಕಿಯವರನ್ನ ಸತ್ಕರಿಸಲಾಯಿತು.

ಕರ್ನಾಟಕ ರಾಜ್ಯ ಖಾಸಗಿ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ವಿಲ್ಸನ್ ಮೈಲಿ ಇದೇ ಸಮಯದಲ್ಲಿ ಮಾತನಾಡಿ, ತಮ್ಮಸಂಘ ಯಾವತ್ತೂ ಬೆಂಬಲ ಸಹಕಾರ ನಿಮಗಿದೆ. ಶೈಕ್ಷಣಿಕ ಅಭಿವೃದ್ಧಿ ಪರ ಕೆಲಸಗಳಿಗೆ ಸಂಘಟನೆಯು ತಮ್ಮೊಂದಿಗೆ ಇರುತ್ತದೆ ಎಂದರು.
ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷೆ ಡಾ. ಲತಾ ಮುಳ್ಳೂರ ಅವರು ಮಾತನಾಡಿ, ತಮ್ಮ ವಲಯಕ್ಕೆ ಗಿರೀಶ್ ಪದಕಿಯವರು ಬಂದಿರುವುದು ಸಂತಸ ತಂದಿದೆ. ಸರ್ವ ಸಂಘಟನೆಗಳನ್ನು ಸಮಾನವಾಗಿ ಸ್ವೀಕರಿಸುವ ಹೃದಯ ಸಿರಿವಂತಿಕೆ ಅಧಿಕಾರಿಯನ್ನು ಪಡೆದಿರುವುದು ನಮ್ಮೆಲ್ಲರ ಸುದೈವವಾಗಿದೆ ಎಂದರು. ಇಲಾಖೆಯಿಂದ ಏರ್ಪಡಿಸುವಂತ ಶೈಕ್ಷಣಿಕ ಚಟುವಟಿಕೆಗಳಿಗೆ, ಕಾರ್ಯಗಳಿಗೆ ಶಿಕ್ಷಕರ ಸಂಬಂಧಿಸಿದ ಯೋಜನೆಗಳಿಗೆ ನಮ್ಮ ಸಂಘಟನೆಯ ಸರ್ವಸಮ್ಮತದಿಂದ ಸಹಕರಿಸುತ್ತೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸುಧಾಮಣಿ, ಬಳಗಾನೂರ, ಕೆಮ್ಮಣ್ಣ ಕೇರಿ, ಬಿರಾದಾರ, ಗೋಕಾವಿ, ಗುಂಜಾಳ, ಷಡನೂರಾ, ಲಿಂಗದ, ಕುಲಕರ್ಣಿ, ಹೊಂಬಳ, ಉಮಾದೇವಿ ಕಲಕೋಟಿ, ಟಿ.ಎಸ್. ಅರವಳ್ಳಿ, ಆರ್.ಎಚ್. ದೊಡ್ಡಮನಿ, ಎ.ಎಂ. ದೊಡ್ಡಮನಿ, ಆರ್.ಬಿ. ದಿಲಶಾದ, ಎಸ್.ಎಂ.ಹೂಗಾರ ಉಪಸ್ಥಿತರಿದ್ದರು.