Posts Slider

Karnataka Voice

Latest Kannada News

ಮೇಜರ್ ಸಿದ್ಧಲಿಂಗಯ್ಯನವರೇ, ನಿಮ್ಮ ಕಚೇರಿ ಪಕ್ಕದಲ್ಲೇ ಹೀಗೆ…. ನೀವೂ, ನಿಮ್ಮ ಶಿಸ್ತು ಏನಾಗಬೇಡಾ…!

1 min read
Spread the love

ಕೊರೋನಾ ಸಮಯದಲ್ಲಿ ಸಾಮಾಜಿಕ ಅಂತರವನ್ನ ಕಾಪಾಡಬೇಕೆಂಬ ಒಂದೇ ಒಂದು ನಿಯಮವನ್ನೂ ಪಾಲಿಸಲು ಆಗದವರು…

ಧಾರವಾಡ: ಇದು ಇವತ್ತಿನ ಸ್ಥಿತಿ. ಹೇಳೋದು ಮಾತ್ರ ವೇದವಾಕ್ಯ ತಿನ್ನೋದು ಮಾತ್ರ ಬದನೆಕಾಯಿ. ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಹೇಳುವವರು ಕೇಳುವವರು, ಜಿಲ್ಲೆಯಲ್ಲಿ ಯಾರೂ ಇಲ್ಲಾ. ಸದಾ ಶಿಸ್ತಿನ ಬಗ್ಗೆ ಮಾತಾಡುವ ಮಾನ್ಯ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯ ಕೂಗಳತೆ ದೂರದಲ್ಲೇ, ಕಾನೂನು ಉಲ್ಲಂಘನೆಯನ್ನ ತಮ್ಮದೇ ಇಲಾಖೆಯ ಅಧಿಕಾರಿಗಳು ಮಾಡುತ್ತಿದ್ದರೂ, ಆಯುಕ್ತರು ಮಾತ್ರ ಸುಮ್ಮನೆ ಕೂತಿರುವುದು, ಅವರ ಶಿಸ್ತಿನ್ನ ಸಾಕಷ್ಟು ಪ್ರದರ್ಶನ ಮಾಡುತ್ತಿದೆ ಎನ್ನುವುದು ಶಿಕ್ಷಣ ಪ್ರೇಮಿಗಳ ಅಂಬೋಣ.

ಹೌದು.. ಕೊರೋನಾ ಸಮಯದಲ್ಲಿ ಹೀಗೆ ಇರಬೇಕು, ಹೀಗೆ ಇರಬಾರದು ಎಂದು ಶಿಕ್ಷಕರಿಗೆ ಆದೇಶಗಳನ್ನ ಹೊರಡಿಸುವ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅದೇಗೆ ನಡೆದುಕೊಂಡಿದ್ದಾರೆ. ತಾವೇ ನೋಡಿ. ಒಬ್ಬರು ಮಾಸ್ಕ್ ಯಾಕೆ ಹಾಕಬೇಕು ಎಂದು ನಿಂತಿದ್ದರೇ, ಮತ್ತೊಬ್ಬರು ಮಾಸ್ಕ್ ಎಲ್ಲಿ ಹಾಕಬೇಕೆಂದು ಗೊತ್ತೆಯಿಲ್ಲವೇನೋ ಎಂಬುವಂತೆ ನಡೆದುಕೊಂಡಿದ್ದಾರೆ.

ಕ್ಷೇತ್ರ ಶಿಕ್ಷಣಾಧಿಕಾರಿಗಳು ಹೀಗೆ ನಡೆದುಕೊಂಡು ಕೊರೋನಾ ಎರಡನೇಯ ಅಲೆಯ ನಿಯಮಗಳನ್ನ ಗಾಳಿಗೆ ತೂರಿದ್ದಾರೆ. ಬೇರೆ ಬೇರೆ ಜಿಲ್ಲೆಗಳಿಗೆ ಹೋಗಿ, ಶಿಸ್ತನ್ನ ಪ್ರದರ್ಶನ ಮಾಡುವ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಅವರು, ಏನೂ ಗೊತ್ತೆಯಿಲ್ಲವೆಂಬಂತೆ ಕೂತು, ಅಶಿಸ್ತನ್ನ ಪ್ರದರ್ಶನ ಮಾಡುತ್ತಿದ್ದಾರೆ.

ಸರಕಾರ ಕೆಲಸ ದೇವರ ಕೆಲಸವೆಂದು ಹೇಳಿಕೊಳ್ಳುವ ಮತ್ತೂ ‘ಚಡ್ಡಿ’ ಹಾಕಿಕೊಂಡು ಸನ್ಮಾನ ಮಾಡಿಕೊಂಡಾಗ, ಯಾಕೆ ಹೀಗೆ ನಡೆಯಿತು ಎಂದು ಇಷ್ಟುದ್ದ ಪತ್ರ ಬರೆದಿದ್ದ ಮೇಜರ್ ಸಾಹೇಬ್ರು, ಈ ಪೋಟೊಗಳಿಗೆ ಉತ್ತರ ಕೊಡ್ತಾರಾ… ಅಥವಾ.. ಪರವೂರಿನಲ್ಲಿ ಶಿಸ್ತಿನ ಬಗ್ಗೆ ಮಾತಾಡಿ ಬರ್ತಾರಾ ಎಂದು ಕಾದು ನೋಡಬೇಕಿದೆ.


Spread the love

Leave a Reply

Your email address will not be published. Required fields are marked *