ಉಣಕಲ್ ಬಳಿ ಚಲಿಸುತ್ತಿದ್ದ ಬೇಂದ್ರೆ ಬಸ್ ಡ್ರೈವರ್ ಗೆ “ಪೀಡ್ಸ್”- ತಪ್ಪಿದ ದುರಂತ…!

ಹುಬ್ಬಳ್ಳಿ: ವಾಣಿಜ್ಯನಗರಕ್ಕೆ ಧಾರವಾಡದಿಂದ ಬರುತ್ತಿದ್ದ ಬೇಂದ್ರೆ ಸಾರಿಗೆ ಬಸ್ ಚಾಲಕನಿಗೆ ಮೂರ್ಚೆರೋಗ ಬಂದ ಹಿನ್ನೆಲೆಯಲ್ಲಿ ಬಸ್ ನಿಯಂತ್ರಣ ತಪ್ಪಿ, ವಾಹನಗಳಿಗೆ ಡಿಕ್ಕಿ ಹೊಡೆದಿದ್ದು, ದುರಂತವೊಂದು ತಪ್ಪಿದೆ.

ಬಸವರಾಜ ಶಾಂತಪ್ಪ ಕುಂದಗೋಳ ಎಂಬ ಚಾಲಕನೇ ಅವಘಡದ ನಡುವೆಯೂ ಅಪಘಾತವನ್ನ ತಪ್ಪಿಸಿದ್ದು, ಘಟನೆಯಲ್ಲಿ ಎರಡು ದ್ವಿಚಕ್ರವಾಹನಗಳು ಜಖಂಗೊಂಡಿವೆ.
ಚಾಲಕನ ಸ್ಥಿತಿಯನ್ನ ಕಂಡು ಸ್ಥಳೀಯರು ಆಸ್ಪತ್ರೆಗೆ ರವಾನೆ ಮಾಡಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ, ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.