Posts Slider

Karnataka Voice

Latest Kannada News

ಕೊರೋನಾ ವಾರಿಯರ್ ಗೆ ಸೋಂಕು ಧೃಡ: ಜಿಲ್ಲಾಧಿಕಾರಿ ಮಾಹಿತಿ

1 min read
Spread the love

ಬಳ್ಳಾರಿ: ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅಧಿಕೃತ ಮಾಹಿತಿ ನೀಡಿದ್ದು, ಕೋವಿಡ್ ಆಸ್ಪತ್ರೆ ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ ಎಂದಿದ್ದಾರೆ.

ಜಿಲ್ಲೆಯಲ್ಲಿ ಕೊರೋನಾ ವಾರಿಯರ್ ಗೆ ಸೋಂಕು ತಗುಲಿದ್ದು ಮೊದಲ ಪ್ರಕರಣವಾಗಿದೆ. ಆಸ್ಪತ್ರೆಯ ಐಸೋಲೇಷನ್ ವಾರ್ಡ್ ನಲ್ಲಿ ಕೆಲಸ ಮಾಡುತ್ತಿದ್ದ ಪುರುಷ ಸಿಬ್ಬಂದಿಗೆ ಸೋಂಕು‌ ತಗುಲಿದೆ. 34 ವರ್ಷದ ಪುರುಷ ಸ್ಟಾಪ್ ನರ್ಸ್ ಗೆ ತಗುಲಿದ ಸೋಂಕು. ನಿನ್ನೆ 15  ಜನ ಸಿಬ್ಬಂದಿಯ ಗಂಟಲು ದ್ರವ ಮತ್ತು ರಕ್ತದ ಮಾದರಿ ಪರೀಕ್ಷೆ ನಡೆಸಲಾಗಿತ್ತು, ಆ ಪೈಕಿ 14  ನೆಗೆಟಿವ್ ಬಂದ್ರೆ, ಒಂದು ಪಾಸಿಟಿವ್ ಆಗಿದೆ. ಐಸೋಲೇಷನ್ ವಾರ್ಡ್ ನಲ್ಲಿ 14 ದಿನ ಕೆಲಸ ಮಾಡಿದ ಸಿಬ್ಬಂದಿಗೆ ಟೆಸ್ಟ್. ಇವರ ಜತೆ ಸಂಪರ್ಕದಲ್ಲಿದ್ದ ಇತರ  8  ಸಿಬ್ಬಂದಿಗೆ ಕ್ವಾರಂಟೈನ್ ಮಾಡಲಾಗಿದೆ. ಈ ಮೂಲಕ ಬಳ್ಳಾರಿಯಲ್ಲಿ ಸೋಂಕಿತರ ಸಂಖ್ಯೆ 37 ಕ್ಕೆ ಏರಿಕೆಯಾಗಿದೆ.


Spread the love

Leave a Reply

Your email address will not be published. Required fields are marked *

You may have missed